ಚಿತ್ರದುರ್ಗ: ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರನ್ನು ಪದಚ್ಯುತಿಗೊಳಿಸಲು ಪಕ್ಷಭೇದ ಮರೆತು ಒಂದಾಗಿರುವ ಸದಸ್ಯರು ಶುಕ್ರವಾರ ರಾತ್ರಿ ರೆಸಾರ್ಟ್ಗೆ ತೆರಳಿದ್ದಾರೆ.
ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು 31 ಸದಸ್ಯರು ಅವಕಾಶ ಕೋರಿ ಪತ್ರ ನೀಡಿದ್ದರು. ಬಳಿಕ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ನಲ್ಲಿ ಒಗ್ಗಟ್ಟು ಇರಲಿಲ್ಲ. ಇದನ್ನು ಮನಗಂಡ ಪಕ್ಷದ ಮುಖಂಡರು ಬಹುತೇಕ ಎಲ್ಲ ಸದಸ್ಯರನ್ನು ಗೋವಾ ಪ್ರವಾಸಕ್ಕೆ ಕಳುಹಿಸಿದ್ದಾರೆ.
ಶುಕ್ರವಾರ ರಾತ್ರಿ 10.45ರ ಸುಮಾರಿಗೆ ಸರ್ಕಾರಿ ಕಲಾ ಕಾಲೇಜು ಎದುರು ಸೇರಿದ ಸದಸ್ಯರು ಒಂದು ಬಸ್ ಹಾಗೂ 6 ಕಾರುಗಳಲ್ಲಿ ತೆರಳಿದರು.