ಆ ಬಗ್ಗೆ ಆದೇಶ ಹೊರಡಿಸಿರುವ ಗೃಹ ಇಲಾಖೆ, ‘ಜಗತ್ತಿನಾದ್ಯಂತ ತೀವ್ರ ಸಂಚಲನ ಉಂಟುಮಾಡಿದ್ದ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಎಸ್ಐಟಿ ತಂಡದ ಸದಸ್ಯರು, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಚಾಣಾಕ್ಷತನ ಹಾಗೂ ನಿಷ್ಠೆಯಿಂದ ಭೇದಿಸಿದ್ದಾರೆ. ತಂಡದದಲ್ಲಿದ್ದ 91 ಮಂದಿಗೆ ₹ 25 ಲಕ್ಷ ಬಹುಮಾನ ಘೋಷಿಸಲಾಗಿದೆ’ ಎಂದು ಹೇಳಿದೆ.