ಹಾಗೆಯೇ ದಿನಸಿ, ಕೋಳಿ, ಕುರಿ ಮಾಂಸದ ಅಂಗಡಿಗಳಲ್ಲೂ ಪಟ್ಟಣದ ಜನ ಮಾತ್ರ ಕಂಡುಬಂದರು. ಇದರಿಂದಾಗಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಬಂದಂತಹ ಗ್ರಾಹಕರು ಅಂತರ ಕಾಯ್ದುಕೊಂಡರು.ಉಳಿದಂತೆ ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕರು, ಸಿಬ್ಬಂದಿಗಳು, ಬ್ಯಾಂಕುಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಇಲಾಖೆಯವರು, ಆರೋಗ್ಯ ಇಲಾಖೆಯವರು ಯಾವುದೇ ಗೊಂದಲ, ಭಯವಿಲ್ಲದ ತಮ್ಮ ಸೇವೆಯಲ್ಲಿ ತೊಡಗಿದ್ದರು.