ಶಿವಾಜಿ ಪುತ್ಥಳಿ ನಿರ್ಮಾಣಕ್ಕೆ ಹಾಗೂ ಕೋಟೆಯ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದಿಂದ ₹3.5 ಕೋಟಿ ಅನುದಾನ ಪಡೆದುಕೊಂಡು, ಮರಾಠಿ ಮತದಾರರನ್ನು ಸೆಳೆಯಲು ಶಾಸಕಿ ಲಕ್ಷ್ಮಿ ಅವರು ಮರಾಠಿ ಭಾಷೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು ಎಂದು ಕಿಡಿಕಾರಿದ್ದರು. ಇದಲ್ಲದೇ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಟಿ.ಎಸ್. ನಾಗಾಭರಣ ಅವರು ಕೂಡ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು, ತಕ್ಷಣ ಕ್ರಮಕೈಗೊಳ್ಳುವಂತೆ ತಿಳಿಸಿದ್ದರು.