ಧರ್ಮಸ್ಥಳ, ತಿರುಪತಿ, ಶ್ರೀಶೈಲ ಸನ್ನಿಧಾನದ ನಂದಾದೀಪಗಳು ನಂದಿ ಹೋದವು ಎಂಬ ಗಾಳಿ ಸುದ್ದಿಗಳು ಗುರುವಾರ ರಾತ್ರಿಯಿಂದಲೇ ಚಿತ್ರದುರ್ಗ, ಬಳ್ಳಾರಿಗಳಲ್ಲಿ ಹರಿದಾಡಿದ್ದವು. ಹೀಗಾಗಿ ಮಹಿಳೆಯರು ತಮ್ಮ ಮನೆಗಳ ಎದುರು ದೀಪ ಬೆಳಗಿದ್ದರು. ಈ ಸುದ್ದಿ ಪ್ರಸಾರವಾಗುತ್ತಲೇ ಸ್ಪಷ್ಟನೆ ನೀಡಿರುವ ವೀರೇಂದ್ರ ಹೆಗ್ಗಡೆ ಅವರು, ಇವೆಲ್ಲವೂ ಸುಳ್ಳು ಎಂದು ತಿಳಿಸಿದ್ದಾರೆ.