ವಿಧಾನಪರಿಷತ್ತಿನಲ್ಲಿ ಸರ್ಕಾರದ ಗಮನ ಸೆಳೆದ ಅವರು, ‘ಗುಜರಾತ್ನ ಹಿಂದು ಯುವತಿಯನ್ನು ಮೋಸದಿಂದ ಮದುವೆಯಾದ ಕೇರಳದ ಮುಸ್ಲಿಂ ಯುವಕ ನಜೀರ್, ಆಕೆಯನ್ನು ಮತಾಂತರ ಮಾಡಿ ಅತ್ಯಾಚಾರ ನಡೆಸಿದ. ಬಳಿಕ ಆಕೆಯನ್ನು ಅರಬ್ ಶೇಖ್ಗಳಿಗೆ ಮಾರುವ ಸಂಚು ಮಾಡಿದ್ದ. ಈತನಿಗೆ ರಾಜ್ಯದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿ ಇರ್ಫಾನ್ ಖಾನ್ ಮತ್ತು ಅವರ ಪತ್ನಿ ಸಹಕಾರ ನೀಡಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ತನಿಖಾ ದಳ ವಿಚಾರಣೆ ನಡೆಸಿದೆ’ ಎಂದರು.