ಸಂಪ್ರದಾಯದಂತೆ ದೊಡ್ಡಬ್ಯಾಡಿಗೆರೆ ಗ್ರಾಮಸ್ಥರು ಹಿಡಿದು ತಂದಿದ್ದ ಕಾಡು ಮೊಲದ ಕಿವಿಗೆ ಮುರು ಎಂಬ ಚಿನ್ನದ ಕಿವಿಯೋಲೆಯನ್ನು ಅರ್ಚಕರು ತೊಡಿಸಿ ದೇವರಿಗೆ ಸಮರ್ಪಿಸಿ, ಗಣ್ಯರಿಗೆ ಮುಟ್ಟಿಸಿದರು. ಬಳಿಕ ದೊಡ್ಡ ಬ್ಯಾಡಿಗೆರೆ ಗ್ರಾಮದ ಪ್ರಮುಖರಿಗೆ ಮೊಲ ಹಿಂತಿರುಗಿಸಲಾಯಿತು. ನಂತರ ಮೊಲವನ್ನು ಮರಳಿ ಕಾಡಿಗೆ ಬಿಟ್ಟರು.