ಬೆಳಗಾವಿ: ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಕಾಗವಾಡದಲ್ಲಿ ಉಪಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಹೌದು ಹುಲಿಯಾ ಎಂದು ಡೈಲಾಗ್ ಹೊಡೆದಿದ್ದರು.
ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಹೌದು ಹುಲಿಯಾ ಎಂದು ಹೇಳಿದ್ದ ವ್ಯಕ್ತಿಯನ್ನು ವಿಡಿಯೊದಲ್ಲಿ ನೋಡಬಹುದಾಗಿದೆ. ಈ ಡೈಲಾಗ್ ಹೊಡೆದಿದ್ದ ವ್ಯಕ್ತಿಯ ಹುಡುಕಾಟಕ್ಕೆ ನೆಟ್ಟಿಗರು ಗೂಗಲ್ ಮೊರೆ ಹೋಗಿದ್ದರು.
ಸಿದ್ದರಾಮಯ್ಯ ಅವರು, ‘ಇಂದಿರಾಗಾಂಧಿ ದೇಶಕ್ಕೋಸ್ಕರ ಪ್ರಾಣ ತೆತ್ತರು’ ಎನ್ನುತ್ತಿದ್ದಂತೆಯೇ, ಜನರ ಸಾಲಿನಲ್ಲಿದ್ದ ವ್ಯಕ್ತಿಯೊಬ್ಬ ‘ಹೌದು ಹುಲಿಯ’ ಎಂದಿದ್ದರು.