ಬೆಂಗಳೂರು:ರಾಜ್ಯ ಸರ್ಕಾರ ಏಳು ಐಪಿಎಸ್ ಅಧಿಕಾರಿಗಳನ್ನು ಸೋಮವಾರ ಮಧ್ಯರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಸಾಮಾನ್ಯವಾಗಿ ವರ್ಗಾವಣೆ ಆದೇಶಕ್ಕೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ವಿಭಾಗದ ಹೆಚ್ಚುವರಿ ಕಾರ್ಯದರ್ಶಿ ಸಹಿ ಮಾಡಲಾಗುತ್ತದೆ. ಆದರೆ, ಈ ಆದೇಶಕ್ಕೆ ಡಿಪಿಆರ್ ಕಾರ್ಯದರ್ಶಿ ಸಹಿ ಮಾಡಿರುವುದು ವಿಶೇಷ. ಮೂರು ವರ್ಷಗಳ ಕಾಲ ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತರಾಗಿದ್ದ ಆರ್.ಹಿತೇಂದ್ರ ಮತ್ತು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಶರಣಪ್ಪ ಅವರನ್ನು ವರ್ಗಾವಣೆ ಮಾಡಿದ್ದರೂ ಸೂಕ್ತ ಹುದ್ದೆ ತೋರಿಸಿಲ್ಲ.
* ವರ್ಗಾವಣೆಗೊಂಡವರು
ಹರಿಶೇಖರನ್– ಹೆಚ್ಚುವರಿ ಆಯುಕ್ತ, ಬೆಂಗಳೂರು ಸಂಚಾರ ವಿಭಾಗ