‘ಕಾಂಗ್ರೆಸ್ ಮತ್ತು ಬಿಜೆಪಿ ಹಿಂದುತ್ವವನ್ನು ಸವಾರಿ ಮಾಡುವ ಮೂಲಕ ಅಧಿಕಾರ ಪಡೆದುಕೊಳ್ಳುವ ಇಂಗಿತ ಹೊಂದಿವೆ. ಅಧಿಕಾರದಲ್ಲಿ ಇದ್ದಾಗ ಬಿಜೆಪಿ ಗೋಹತ್ಯೆ ನಿಷೇಧ ಮಾಡಿಲ್ಲ. ಇದು ಯಾವ ರೀತಿಯ ಹಿಂದುತ್ವ ಎಂದು ಪ್ರಶ್ನಿಸಿದರು. ಹಿಂದುತ್ವದ ಬಗ್ಗೆ ಮಾತನಾಡಿದಕ್ಕೆ ನನ್ನ ಮೇಲೆ 7 ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ. ಹಿಂದೂ ಕಾರ್ಯಕರ್ತರು ಸತ್ತಾಗ ಮಾತ್ರ ಕಣ್ಣೀರು ಸುರಿಸುತ್ತಾರೆ, ಕೋರ್ಟ್, ಕಚೇರಿಗೆ ಅಲೆದಾಡುವ ಕಾರ್ಯಕರ್ತರ ಬಗ್ಗೆ ಯಾರೂ ಸಹ ಮಾತಾಡುವುದಿಲ್ಲ, ಸಹಕಾರ ನೀಡುವುದಿಲ್ಲ’ ಎಂದು ಬಿಜೆಪಿಯನ್ನು ದೂರಿದರು.