ಅಪಘಾತವಾದಾಗ ನಿತ್ರಾಣ ಸ್ಥಿತಿಯಲ್ಲಿದ್ದ ನಾಗರಾಜ್ ಪ್ರಸ್ತುತ ಗುಣಮುಖವಾಗಿದ್ದಾರೆ. ಆದರೆ, ಅವರು ಓಡಾಡಲು ಸಾಧ್ಯವಾಗದೆ ಮಲ, ಮೂತ್ರವನ್ನು ಮಲಗಿದಲ್ಲಿಯೇ ಮಾಡಿಕೊಳ್ಳುತ್ತಾರೆ. ಇದರ ಸ್ವಚ್ಛತೆಗೆ ನ್ಯಾಫಿಕ್ ಅಳವಡಿಕೆ, ಊಟ– ತಿಂಡಿ ಇತ್ಯಾದಿಗೆ ಪ್ರತಿ ನಿತ್ಯ ₹ 250ಕ್ಕೂ ಹೆಚ್ಚು ವೆಚ್ಚ ತಗಲುತ್ತಿದ್ದು ಇವೆಲ್ಲವನ್ನೂ ಸಹ ತಾವೇ ಭರಿಸುತ್ತಿದ್ದಾರೆ. ಒಂದೂವರೆ ತಿಂಗಳಿನಿಂದಲೂ ಪ್ರತಿ ನಿತ್ಯ ಆಸ್ಪತ್ರೆಗೆ ಭೇಟಿ ನೀಡಿ ಆರೈಕೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಜುಬೇದ ಅವರು ಅನಾಥ ಶವಗಳ ಅಂತ್ಯ ಸಂಸ್ಕಾರ ಮಾಡುವ ಕೆಲಸ ಮಾಡಿದ್ದರು. ಹಲವು ರೀತಿ ಸಮಾಜ ಕಾರ್ಯ ಮಾಡುತ್ತಿರುವ ಜುಬೇದ ಅವರ ಸಮಾಜಮುಖಿ ಕಾರ್ಯಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ.