ಮನುಕುಲದ ಚರಿತ್ರೆಯ ಮೂಲಕ ಮಾನವ ನಾಗರಿಕ ಇತಿಹಾಸ, ನೆಲೆ ನಿಲ್ಲುವ ತವಕ ಇತ್ಯಾದಿಗಳನ್ನು ವೈಜ್ಞಾನಿಕವಾಗಿ ಹೇಳುತ್ತಲೇ ಸೈದ್ಧಾಂತಿಕ ಒಳನೋಟಗಳನ್ನು ಈ ಕೃತಿ ಪರಿಚಯಿಸುತ್ತದೆ. ಊರದೇವತೆ, ಜನಪದ ಕಲಾವಿದನೊಬ್ಬನ ಆತ್ಮಕಥನ, ನೀಲಗಾರರು, ಹಬ್ಬ–ಹರಿದಿನಗಳ, ಸೌಹಾರ್ದದ ಭಾವಬಿಂಬಗಳನ್ನು ಸಹಜವಾಗಿ ಹೇಳುತ್ತ ಊರಿಗೆ ಜೀವ ತುಂಬಿದ ಹಿರಿಯ ಜೀವಗಳನ್ನೂ ಕೃತಿ ಪರಿಚಯಿಸುತ್ತದೆ.