‘ಭೂಸುಧಾರಣೆಗೆ ಸಂಬಂಧಪಟ್ಟ ಹಲವು ಪ್ರಕರಣಗಳು ದಶಕಗಳಿಂದಲೂ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೆ
ಉಳಿದಿವೆ. ಕಾನೂನು ಉಲ್ಲಂಘಿಸಿ ಭೂಮಿ ಖರೀದಿಸಿದ ಪ್ರಕರಣಗಳಲ್ಲಿ ಜಮೀನು ಮುಟ್ಟುಗೋಲು ಮಾಡಿ ಸ್ವಾಧೀನಕ್ಕೆ ಪಡೆದಿರುವ ಅಂಕಿ ಅಂಶಗಳನ್ನು ಹೈಕೋರ್ಟ್ಗೆ ಸಲ್ಲಿಸಲು ಸರ್ಕಾರಕ್ಕೆ ಆದೇಶಿಸಲಾಗಿತ್ತು. ಆದರೆ, ಸರ್ಕಾರ ಮಾಹಿತಿ ನೀಡುವ ಬದಲು,
ಈ ಹೊಣೆಯಿಂದ ನುಣುಚಿಕೊಳ್ಳಲು ಕಾಯ್ದೆ ತಿದ್ದುಪಡಿಗೆ ಯತ್ನಿಸಿದೆ. ಕಾನೂನು ಉಲ್ಲಂಘಿಸಿರುವ 12,231 ಪ್ರಕರಣಗಳನ್ನು ವಜಾಗೊಳಿಸಿ, ಶ್ರೀಮಂತರಿಗೆ ಅನುಕೂಲ ಮಾಡಿಕೊಡುವ ಹುನ್ನಾರ ನಡೆದಿದೆ’ ಎಂದು ದೂರಿದರು.