‘ವೀರೇಂದ್ರ ಪಾಟೀಲರು 180 ಸೀಟುಗಳನ್ನು ಚುನಾವಣೆಯಲ್ಲಿ ಗೆದ್ದಿದ್ದರು. ಆದರೆ, ಒಂದು ವರ್ಷಕ್ಕೆ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸಲಾಯಿತು. ಈಗ ಅಂತಹದ್ದು ಮತ್ತೆ ಆಗಬಾರದು. ನಿಜಲಿಂಗಪ್ಪನವರಿಂದ ಇಲ್ಲಿಯವರೆಗಿನ ಲಿಂಗಾಯತ ನಾಯಕರಿಗೆ ಆದ ಸ್ಥಿತಿ ಯಡಿಯೂರಪ್ಪನವರಿಗೆ ಆಗಬಾರದು. ಯಡಿಯೂರಪ್ಪ ಎಂಬ ಮಗು ಹುಟ್ಟಾಗಿದೆ, ಅದನ್ನು ಮುಂಗುಸಿಯಿಂದ ರಕ್ಷಿಸುವ ಕೆಲಸ ಸಮಾಜದವರು ಮಾಡಬೇಕು’ ಎಂದು ಮನವಿ ಮಾಡಿದರು.