ಬಳ್ಳಾರಿ: ಬಳ್ಳಾರಿಯ ಶಾಸಕರಷ್ಟೇ ಅಲ್ಲದೆ ಇನ್ನೂ ಹಲವರು ರಾಜಿನಾಮೆ ಕೊಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಎಂದು ಶಾಸಕ ಬಿ.ಶ್ರೀರಾಮುಲು ತಿಳಿಸಿದರು.
ನಗರದ ತಮ್ಮ ಮನೆಯಲ್ಲಿ ವಾಹಿನಿಗಳೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಶಾಸಕರಲ್ಲಿ ಅಸಮಾಧಾನ ಇದೆ. ಸರ್ಕಾರಕ್ಕೆ ಅಪಾಯ ಇದೆ' ಎಂದರು.
'ಭಾರತ ಅನೇಕ ವರ್ಷದಿಂದ ಪಾಕಿಸ್ತಾನವನ್ನು ಎದುರಿಸುತ್ತಿದೆ. ಉಗ್ರರು ನಮ್ಮ ಸೈನಿಕರ ಮೇಲೆ ದಾಳಿ ಮಾಡಿದ್ದರಿಂದ ಪ್ರಧಾನಿ ಮೋದಿ ದಿಟ್ಟ ನಿರ್ಧಾರ ಕೈಗೊಂಡರು. ಆದರೆ ಅವರಿಗೆ ಪಕ್ಷಾತೀತವಾಗಿ ಬೆಂಬಲ ನೀಡುವ ಬದಲು ಕಾಂಗ್ರೆಸ್ ನಾಯಕರು ಮತ ಬ್ಯಾಂಕ್ ಗಾಗಿ ಒಂದೊಂದು ಹೇಳಿಕೆ ಕೊಡ್ತಿದ್ದಾರೆ ಎಂದು ದೂರಿದರು.
ಇಂದಿರಾಗಾಂಧಿ ಪಾಕಿಸ್ತಾನದ ವಿರುದ್ದ ತೊಡೆ ತಟ್ಟಿದಾಗ ವಿರೋಧ ಪಕ್ಷದಲ್ಲಿದ್ದ ವಾಜಪೇಯಿ. ಇಂದಿರಾ ಅವರನ್ನು ದುರ್ಗಿಗೆ ಹೋಲಿಸಿದ್ದರು ಎಂದು ಸ್ಮರಿಸಿದರು.
ಶಾಸಕರಾದ ಗಣೇಶ್ ಮತ್ತು ಆನಂದ ಸಿಂಗ್ ನಡುವಿನ ಜಗಳ ವೈಯಕ್ತಿಕವಾದದ್ದು. ಜಿಲ್ಲೆಯ ಜನರು ಈ ಘಟನೆಗೆ ತಲೆ ಕೆಡಸಿಕೊಳ್ಳಬಾರದು ಎಂದರು.