ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿರಾಶ್ರಿತ ಯುವತಿ, ಮದುವೆಗೆ ಸಾಕ್ಷಿಯಾದ ಮಡಿಕೇರಿ

ಮಡಿಕೇರಿ: ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆಯು ಮೂರನೇ ನಿರಾಶ್ರಿತರ ಯುವತಿಯ ಮದುವೆಗೂ ಸಾಕ್ಷಿ ಆಯಿತು. ಮನೆ ಕಳೆದುಕೊಂಡು ಪರಿಹಾರ ಕೇಂದ್ರ ಸೇರಿದ್ದ 2ನೇ ಮೊಣ್ಣಂಗೇರಿಯ ನಿವಾಸಿ ವಾರಿಜಾ ಹಾಗೂ ಪುಣೆಯ ರುದ್ರೇಶ್ ಅವರ ವಿವಾಹವು ಗಣಪತಿ ದೇವಸ್ಥಾನದಲ್ಲಿ ಗುರುವಾರ ನೆರವೇರಿತು.
ಆಶ್ರಯ ಕಳೆದುಕೊಂಡ ಕುಟುಂಬವು ಮದುವೆ ದಿನಾಂಕ ಮುಂದೂಡಲು ನಿರ್ಧರಿಸಿತ್ತು. ಆದರೆ, ಸಂಘ– ಸಂಸ್ಥೆಗಳ ಸಹಕಾರದಿಂದ ನಿಗದಿತ ಮುಹೂರ್ತದಲ್ಲೇ ಮದುವೆ ನೆರವೇರಿತು. ನೆರವು ಸ್ಮರಿಸಿ ವಾರಿಜಾ ಅವರ ತಾಯಿ ರೋಹಿಣಿ ಕಣ್ಣಾಲಿಗಳು ತೇವಗೊಂಡವು. ಬುಧವಾರ ಕಲ್ಲುಗುಂಡಿಯ ಸರ್ಕಾರಿ ಶಾಲೆಯ ಪರಿಹಾರ ಕೇಂದ್ರದಲ್ಲಿ ಮದರಂಗಿ ಶಾಸ್ತ್ರವೂ ನಡೆದಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.