ಮಡಿಕೇರಿ: ಮದುವೆಯ ಕನಸನ್ನೇ ಮಹಾಮಳೆ ನುಚ್ಚುನೂರು ಮಾಡಿತ್ತು. ಮನೆ, ಚಿನ್ನಾಭರಣ ಕಳೆದುಕೊಂಡಿದ್ದ ಮದುಮಗಳ ಕುಟುಂಬಸ್ಥರಿಗೂ ದಿಕ್ಕು ತೋಚದೆ ಮದುವೆಯ ದಿನಾಂಕ ಮುಂದೂಡಲು ನಿರ್ಧರಿಸಿದ್ದರು.
ಆದರೆ, ಧೈರ್ಯ ಕಳೆದುಕೊಳ್ಳದ ವರ ಮಾತ್ರ ನಿಗದಿತ ಮುಹೂರ್ತದಲ್ಲಿ ಸರಳವಾಗಿ ಮದುವೆ ಮಾಡಿಕೊಡುವಂತೆ ಯುವತಿಯ ಕುಟುಂಬಸ್ಥರನ್ನು ಮನವೊಲಿಸಿದ್ದು, ನಗರದ ಓಂಕಾರೇಶ್ವರ ದೇಗುಲದಲ್ಲಿ ಗುರುವಾರ ಸರಳವಾಗಿ ನೆರವೇರಿತು.
ಹಟ್ಟಿಹೊಳೆಯ ಕುಸುಮಾ ಅವರನ್ನು ಅರೆಕಾಡು ಗ್ರಾಮದ ಧನಂಜಯ ವರಿಸಿದರು.