‘ನಾನು ನಿನ್ನೆ ನೀಡಿದ್ದ ಹೇಳಿಕೆಯನ್ನು ಸಂಪೂರ್ಣ ತಪ್ಪಾಗಿ ಅರ್ಥೈಸಲಾಗಿದೆ. ದೇಶದ ಸಶಸ್ತ್ರಪಡೆಗಳ ಬಗ್ಗೆ ನನಗೆ ಅಪಾರ ಗೌರವವಿದೆ. ದೇಶದ ಭದ್ರತೆಗಾಗಿ ಗಡಿಯಲ್ಲಿ ಹೋರಾಡುವ ಯೋಧರ ಧೈರ್ಯ–ಸಾಹಸಗಳನ್ನು ನಾನು ಗೌರವಿಸುತ್ತೇನೆ. ದೇಶದ ಜನರ ಜೊತೆಗೆ ನಿಂತು ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ಕ್ಷೇಮವಾಗಿ ಹಿಂದಿರುಗಲಿ ಎಂದು ನಾನು ಪ್ರಾರ್ಥಿಸುತ್ತೇನೆ. ನನಗೆ ಯಾವಾದಲೂ ದೇಶವೇ ಮೊದಲು, ನಂತರ ಪಕ್ಷ’ ಎಂದು ಯಡಿಯೂರಪ್ಪ ಹೇಳಿದ್ದಾರೆ.