ಬಿಜೆಪಿಯವರು ಬರುವ ವಿಷಯ ತಿಳಿದು ಕೇರಿಯ ಪರಿಶಿಷ್ಟ ಜಾತಿ, ವಾಲ್ಮೀಕಿ ನಾಯಕರು ಹಾಗೂ ಮುಸ್ಲಿಮರು ಅವರನ್ನು ಪ್ರವೇಶ ದ್ವಾರದ ಬಳಿಯೇ ತಡೆದರು. ಯಾರೊಬ್ಬರೂ ಕೇರಿ ಒಳಗೆ ಹೋಗದಂತೆ ತಡೆಯಲು ಮಾನವ ಸರಪಳಿ ನಿರ್ಮಿಸಿ ನಿಂತರು. ಕಪ್ಪು ಬಾವುಟ ಪ್ರದರ್ಶಿಸಿ, ‘ಗೋ ಬ್ಯಾಕ್’ ಎಂದು ಘೋಷಣೆಗಳನ್ನು ಕೂಗಿದರು. ಈ ವೇಳೆ ಬಿಜೆಪಿ ಮುಖಂಡರು ಹಾಗೂ ಕೇರಿಯ ಜನರ ಮಧ್ಯೆ ಮಾತಿನ ಚಕಮಕಿ ಕೂಡ ನಡೆಯಿತು. ಶಾಸಕ ಆನಂದ್ ಸಿಂಗ್ ಅವರ ಅತ್ತಿಗೆ, ಬಿಜೆಪಿ ನಾಯಕಿ ಕವಿತಾ ಈಶ್ವರ್ ಸಿಂಗ್ ಕೂಡ ಮುಖಂಡರ ಜತೆಗಿದ್ದರು.