ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಪೋಡಿ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ ಜೆಡಿಎಸ್ನ ಅಡಗೂರು ಎಚ್. ವಿಶ್ವನಾಥ್, ‘ತಿಂಗಳಿಗೆ 30 ಅರ್ಜಿ ವಿಲೇವಾರಿ ಆಗಬೇಕೆಂದು ಭೂ ದಾಖಲೆಗಳ ಆಯುಕ್ತ ಮುನೀಷ್ ಮೌದ್ಗಿಲ್ ಅವರು ಸರ್ವೆಯರ್ಗಳ ಮೇಲೆ ಒತ್ತಡ ಹೇರುತ್ತಿದ್ದಾರೆ. ಇದರಿಂದ ಸಮಸ್ಯೆಯಾಗುತ್ತಿದ್ದು ತಪ್ಪುಗಳಾಗುತ್ತಿವೆ. ಈ ಗೊಂದಲ ನಿವಾರಿಸಿ’ ಎಂದರು.