ಇದಕ್ಕೆ ಪೂರಕವಾಗಿ ಮಾತನಾಡಿದ ಶಾಸಕ ಎನ್.ಮಹೇಶ್, ‘ಶ್ರೀಶ್ರೀ ರವಿಶಂಕರ ಗುರೂಜಿ ಅವರು ದೇಶದಲ್ಲಿ ಜಾತಿ ವಿನಾಶವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ದಲಿತರು ತಯಾರಿಸಿದ ಬಿಸಿಯೂಟವನ್ನು ಮೇಲ್ವರ್ಗಗಳಿಗೆ ಸೇರಿದ ಮಕ್ಕಳಿಗೆ ತಿನ್ನಲು ಬಿಡದ ಸಮಾಜ ನಮ್ಮಲ್ಲಿದೆ. ಹೀಗಿರುವಾಗ ಜಾತಿ ನಾಶವಾಗಿದೆ ಎಂದು ಹೇಗೆ ಹೇಳಲು ಸಾಧ್ಯ?’ ಎಂದುಪ್ರಶ್ನಿಸಿದರು.