ಐದು ಮಂದಿಯ ಒಂದು ಕಲಾ ತಂಡವನ್ನು ಕಟ್ಟಿಕೊಂಡಿದ್ದಾರೆ. ಭಕ್ತಿಗೀತೆ, ಜಾನಪದ ಗೀತೆ, ಶೋಕಗೀತೆಗಳು (ಸಾವಿನ ಅಥವಾ ತಿಥಿಯ ಮನೆಗಳಲ್ಲಿ ಹಾಡುವ ಗೀತೆ), ಮಹದೇಶ್ವರ ಮಹಿಮೆ, ಮಂಟೇಸ್ವಾಮಿ, ಸಿದ್ದಪ್ಪಾಜಿ ಕಥೆ, ಅಲಂಬಾಡಿ ಗುಜ್ಜೇಗೌಡ, ಶ್ರವಣ ಸಂಹಾರ, ಬೇವಿನಟ್ಟಿ ಕಾಳಮ್ಮ, ಶರಣೆ ಶಂಕಮ್ಮ, ಮೈಲಾಳ ರಾಮ, ಬಿಳಿಗಿರಿ ರಂಗನಾಥಸ್ವಾಮಿ, ದಕ್ಷಯಜ್ಞ, ನಿಂಗರಾಜಮ್ಮನ ಕಥೆ ಸೇರಿದಂತೆ 15ಕ್ಕೂ ಹೆಚ್ಚು ಕತೆಗಳು ಇವರ ಬಾಯಲ್ಲಿ ಗೀತೆಗಳಾಗಿ ಹೊರಹೊಮ್ಮುತ್ತವೆ. ಆಕಾಶವಾಣಿ, ದೂರದರ್ಶನದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆ ತೋರಿಸಿದ್ದಾರೆ, ಕಲೆಗೆ ಮೆರುಗು ನೀಡಿದ್ದಾರೆ.