ಮುಖ್ಯರಸ್ತೆಯಲ್ಲಿ ‘ಇಂದ್ರಲೋಕ’ ಮಾದರಿಯ ಸ್ವಾಗತ ಕಮಾನು ನಿರ್ಮಿಸಲಾಗಿತ್ತು. ಎರಡೂ ಬದಿಯಲ್ಲಿ ಕೃತಕ ಆನೆಗಳನ್ನು ನಿಲ್ಲಿಸಲಾಗಿತ್ತು. ಮದುವೆ ನಡೆಯುವ ಸ್ಥಳಕ್ಕೆ ಹೋಗುವ ಮಾರ್ಗದಲ್ಲಿ ವಧು–ವರರ ಛಾಯಾಚಿತ್ರಗಳು, ತಳಿರು, ತೋರಣ, ಹೂಗಳ ಅಲಂಕಾರ, ಕಾರಂಜಿ ಎಲ್ಲರನ್ನೂ ಆಕರ್ಷಿಸಿತು. ಅದಾದ ನಂತರ ಥೇಟ್ ತಿರುಮಲದಂತೆ ಏಳು ಬಾಗಿಲುಗಳನ್ನು ನಿರ್ಮಿಸಿ, ವೆಂಕಟೇಶ್ವರ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಅಲ್ಲಿ ಸೆಲ್ಫಿ ತೆಗೆದುಕೊಳ್ಳಲು ಜನ ಮುಗಿಬಿದ್ದಿದ್ದರು.