ಮಕ್ಕಳ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದವರನ್ನು ಮೊದಲ ಸುತ್ತಿನಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸುವ ಮೂಲಕ ಗುರುತಿಸಲಾಗಿತ್ತು. ಪುರಸ್ಕೃತರ ಹೆಸರನ್ನು ತಜ್ಞರ ಸಮಿತಿ ಅಂತಿಮಗೊಳಿಸಿತ್ತು. ಅಂತಿಮ ಸುತ್ತಿನಲ್ಲಿ ನಾ. ಡಿಸೋಜ, ತಿಪಟೂರಿನ ನಾಗರಾಜ ಶೆಟ್ಟಿ, ಕೋಲಾರದ ಸಿ.ಎಂ. ಗೋವಿಂದ ರೆಡ್ಡಿ ಮತ್ತು ನಾಗೇಶ ಹೆಗಡೆ ಅವರ ಹೆಸರುಗಳಿದ್ದವು.