ಬಾಲಕನ ತಾಯಿ ಕವಿತಾ, ‘10 ತಿಂಗಳು ಇದ್ದಾಗ ತಲಸೇಮಿಯಾ ರೋಗ ಇದೆ ಎಂದು ತಿಳಿಯಿತು. ಪ್ರತಿ ತಿಂಗಳು ಬಾಪೂಜಿ ಆಸ್ಪತ್ರೆಯಲ್ಲಿ ರಕ್ತ ಮರುಪೂರಣ ಮಾಡಿಸುತ್ತಿದ್ದೆವು. ಆಗ ಅಸ್ಥಿಮಜ್ಜೆ ಕಸಿ ಬಗ್ಗೆ ಡಾ. ಸುನೀಲ್ ಭಟ್ ಮಾಹಿತಿ ನೀಡಿದರು. ಮಗಳು ನಮ್ರತಾಳ ಅಸ್ಥಿಮಜ್ಜೆ ಹೊಂದಾಣಿಕೆಯಾಯಿತು. ಡಾಕ್ಟರ್ ಸಲಹೆಯಂತೆ ಅಸ್ಥಿಮಜ್ಜೆ ಕಸಿ ಮಾಡಿಸಿದೆವು. ಚಿಕಿತ್ಸೆಗೆ ₹ 10 ಲಕ್ಷ ವೆಚ್ಚವಾಯಿತು. ಈಗ ಹೇಮಂತ್ ಲವಲವಿಕೆಯಿಂದ ಇದ್ದಾನೆ’ ಎಂದು ಹರ್ಷ ವ್ಯಕ್ತಪಡಿಸಿದರು.