ವಾಡಿ ಸಮೀಪದ ಯಾಗಾಪೂರ ವ್ಯಾಪ್ತಿಯ ಪತ್ತು ನಾಯಕ ತಾಂಡಾದಲ್ಲಿ ಸಿಡಿಲಿಗೆ 25 ಕುರಿಗಳು ಬಲಿಯಾಗಿವೆ.
ದೇವಸೂಗೂರು ಹೋಬಳಿ ವ್ಯಾಪ್ತಿಯ ಶಕ್ತಿನಗರ, ಯದ್ಲಾಪುರ ಸೇರಿ ಕೆಲ ಗ್ರಾಮಗಳು ಜಲಾವೃತವಾಗಿವೆ.ಯಾದಗಿರಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದೆ.
ಮಸೀದಿಯ ಮಿನಾರ್ಗೆ ಧಕ್ಕೆ: ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಹಸರಗುಂಡಗಿ ಗ್ರಾಮದಲ್ಲಿ ಬುಧವಾರ ರಾತ್ರಿ ಸಿಡಿಲು ಬಡಿದು ಮಸೀದಿಯ ಮಿನಾರ್ಗೆ ಧಕ್ಕೆಯಾಗಿದೆ. ಮಿನಾರ್ನ ತುತ್ತ ತುದಿಯ ಕೆಳಹಂತದಲ್ಲಿದ್ದ ಗೋಲಾಕಾರದ ಬಿಂದಿಗೆ ಆಕೃತಿ ಒಡೆದಿದೆ. ತುದಿಯ ಭಾಗ ಮುರಿದು ಬೇರೆ ಕಡೆ ವಾಲಿದೆ.
ಸಿಡಿಲಿನಿಂದ ಮಸೀದಿಯ ಅಕ್ಕಪಕ್ಕದಲ್ಲಿರುವ ರೇವಣಸಪ್ಪ ಪೂಜಾರಿ ಮತ್ತು ಇತರರ ಮನೆಗಳಲ್ಲಿದ್ದ ಟಿವಿ, ಫ್ಯಾನ್ ಸುಟ್ಟಿವೆ.