ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗರಹೊಳೆಯಲ್ಲಿ ಹೆಬ್ಬಾವಿಗೆ ಬೆದರಿದ ಹುಲಿರಾಯ!

Last Updated 1 ಸೆಪ್ಟೆಂಬರ್ 2018, 18:25 IST
ಅಕ್ಷರ ಗಾತ್ರ

ಮೈಸೂರು: ವ್ಯಾಘ್ರನ ಸದ್ದು ಕೇಳಿದರೆ ಇತರ ಪ್ರಾಣಿಗಳು ಜಾಗ ಖಾಲಿ ಮಾಡುತ್ತವೆ. ಆದರೆ, ತನ್ನ ಹಾದಿಯಲ್ಲಿ ಎದುರಾದ ಹೆಬ್ಬಾವು ಕಂಡ ಹುಲಿರಾಯ ಬೆದರಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಸಫಾರಿಗೆ ತೆರಳಿದವರು ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ರಸ್ತೆಯಲ್ಲಿ ಮಲಗಿದ್ದ ಹೆಬ್ಬಾವು ನೋಡಿದ ಹುಲಿ ಸ್ವಲ್ಪ ಹೊತ್ತು ಕೀಟಲೆ ಮಾಡುತ್ತದೆ. ಪದೇಪದೇ ದಿಟ್ಟಿಸಿ ನೋಡುತ್ತಾ ಅತ್ತಿಂದಿತ್ತ ತಿರುಗಾಡುತ್ತದೆ. ಹೆಬ್ಬಾವನ್ನು ದಾಟಿ ಮುಂದೆ ಹೋಗಲು ಆ ವ್ಯಾಘ್ರ ಪ್ರಯತ್ನಿಸುತ್ತದೆ. ಹೆಬ್ಬಾವು ತಲೆ ಅಲುಗಾಡಿಸಿದಾಗ ಬೆದರಿ ಹಿಂದೆ ಸರಿಯುತ್ತದೆ. ಸ್ವಲ್ಪ ಹೊತ್ತು ಹೀಗೆ ಮಾಡಿ ಇದರ ಸಹವಾಸವೇ ಬೇಡವೆಂದು ಬೇರೆ ಹಾದಿ ಹಿಡಿಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT