ಬೆಳಗಾವಿ: ಲೋಕಸಭಾ ಚುನಾವಣೆ ಕರ್ತವ್ಯಕ್ಕೆ ಗೈರುಹಾಜರಾದ ಮಾಳಮಾರುತಿ ಠಾಣೆ ಕಾನ್ಸ್ಟೆಬಲ್ ಸಿ.ಎಸ್. ಭರತ ಹಾಗೂ ಉದ್ಯಮಬಾಗ್ ಠಾಣೆಯ ಕಾನ್ಸ್ಟೆಬಲ್ ರುಕ್ಮಿಣಿ ಉಪ್ಪಾರ ಅವರನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್ಕುಮಾರ್ ಆದೇಶಿಸಿದ್ದಾರೆ.
‘ಅವರು ಹಲವು ದಿನಗಳಿಂದ ಕರ್ತವ್ಯಕ್ಕೆ ಅನಧಿಕೃತವಾಗಿ ಗೈರುಹಾಜರಾಗಿದ್ದರು. ಚುನಾವಣೆಯಂತಹ ಮಹತ್ವದ ಕರ್ತವ್ಯಕ್ಕೆ ಹಾಜರಾಗುವಂತೆ ಮೇಲಾಧಿಕಾರಿಗಳು ಸಾಕಷ್ಟು ಬಾರಿ ತಿಳಿಸಿದರೂ ಬಂದಿರಲಿಲ್ಲ’ ಎಂದು ತಿಳಿಸಿದ್ದಾರೆ.