‘ಗೋಲ್ಡರ್ ಹವರ್’ (ಚಿಕಿತ್ಸೆಗೆ ಸ್ಪಂದಿಸುವ ಹಂತ) ನಲ್ಲಿ ಭಗವಾನ್ ಅವರನ್ನು ಕರೆತಂದ ಕಾರಣದಿಂದ ಬದುಕಿಸಲು ಸಾಧ್ಯವಾಯಿತು. ಹೃದಯ ಬಡಿತ ತೀರಾ ಕ್ಷೀಣವಾಗಿತ್ತು. ಅವರ ಆರೋಗ್ಯವನ್ನು ಸ್ಥಿರಗೊಳಿಸಿ ಶಸ್ತ್ರಚಿಕಿತ್ಸೆ ನಡೆಸಿದೆವು. ತೀವ್ರನಿಗಾ ಘಟಕದಲ್ಲಿ ಇರಿಸಲಾಗಿದೆ’ ಎಂದು ಸುಯೋಗ್ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.