ಆತ್ಮಗೌರವ ವೃದ್ಧಿಸುವ ಕುರಿತು ಮಾತನಾಡಿದ ವಾಸುದೇವ್, ‘ನಮಗೆ ಗೌರವ ಯಾಕೆ ಬೇಕು? ನಾವು ಇನ್ನೊಬ್ಬರಿಗಿಂತ ಸದಾ ಒಂದು ಕೈ ಮೇಲೆ ಎಂದು ತೋರಿಸುವುದೇ ಗೌರವ ಎಂದು ಭಾವಿಸುತ್ತೇವೆ. ಅಂದರೆ ಬೇರೆಯವರು ನಮಗಿಂತ ಕೆಳಗಿದ್ದಾಗ ಖುಷಿ ಎಂದುಕೊಳ್ಳುತ್ತೇವೆ. ಇದು ಆತ್ಮಗೌರವ ಅಲ್ಲ. ಅದು ಕಾಯಿಲೆ. ಇದು ತೊಲಗಬೇಕು. ಸೃಷ್ಟಿಯ ಮೂಲವು ನಮ್ಮನ್ನೂ ಇರುವೆಯನ್ನೂ ಒಂದೇ ಬಗೆ ಎಂದು ಭಾವಿಸಿದೆ. ಹಾಗಿರುವಾಗ ನಾವು ಮಾತ್ರ ಶ್ರೇಷ್ಠ ಎಂದು ಹೇಗೆ ಭಾವಿಸಲು ಸಾಧ್ಯ? ಮನುಷ್ಯ ಈ ಪ್ರಪಂಚದ ಕೇಂದ್ರಬಿಂದು ಅನ್ನುವುದು ಮೂರ್ಖ ವಾದ’ ಎಂದು ಹೇಳಿದರು.