ಬೆಳಿಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ್ದ ಸಚಿವರು, ಬುಧವಾರ ಸಂಜೆ ರಮೇಶ ಜೊತೆಗೆ ಮಾತುಕತೆ ನಡೆಸುವುದಾಗಿ ಹೇಳಿದ್ದರು. ಆದರೆ, ಮಾತುಕತೆ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ. ಅವರಿಗೆ ಆಪ್ತರಾಗಿರುವ ಶಾಸಕರ ಮೂಲಕ ಮನವೊಲಿಸುವ ಹಾಗೂ ಇದಕ್ಕಾಗಿ ಇನ್ನಿಬ್ಬರು ಸಹೋದರರಾದ ಶಾಸಕ ಬಾಲಚಂದ್ರ ಜಾರಕಿಹೊಳಿ, ಲಖನ್ ಜಾರಕಿಹೊಳಿ ಅವರನ್ನೂ ಬಳಸಿಕೊಳ್ಳುವ ಸೂತ್ರವನ್ನು ಸತೀಶ ಹೆಣೆದಿದ್ದಾರೆ ಎನ್ನಲಾಗುತ್ತಿದೆ.