ನಾಮಕಾವಾಸ್ತೆಗೆ ನಡೆದಿದೆ ಪರಿಹಾರ ಕಾರ್ಯ: ಚರಿತಾ
ಕೊಡಗು, ಕೇರಳದಲ್ಲಿ ಪ್ರವಾಹದಿಂದಾಗಿ ನೂರಾರು ಮಂದಿ ನಿರಾಶ್ರಿತರಾಗಿದ್ದಾರೆ. ಆಸ್ತಿ – ಪಾಸ್ತಿ ಕಳೆದುಕೊಂಡಿದ್ದಾರೆ. ಕೃಷಿಕರು ಕೃಷಿ ಭೂಮಿ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಮನೆಗಳು ನೀರಿನಲ್ಲಿ ಕೊಚ್ಚಿಹೋಗಿದ್ದು, ಬಹುತೇಕರು ನಿರಾಶ್ರಿತರಾಗಿದ್ದಾರೆ. ಹೀಗಿದ್ದೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಕಟ್ಟಿ ಕುಳಿತಿವೆ. ವಿದೇಶದಿಂದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಹೆಸರಿನಲ್ಲಿ ಹಣ ತರುವ ಕೇಂದ್ರ ಸರ್ಕಾರ, ನೆರೆ ಪರಿಹಾರ ನೀಡಲು ವಿದೇಶಗಳು ಹಣ ನೀಡುವುದಾಗಿ ಹೇಳಿರುವುದನ್ನು ತಿರಸ್ಕರಿಸಿದೆ. ಇತ್ತ ನೆರೆ ಪೀಡಿತ ಪ್ರದೇಶಗಳಿಗೆ ಪರಿಹಾರ ನೀಡಲೂ ಮೀನಮೇಷ ಎಣಿಸುತ್ತಿದೆ. ಈ ಬೆಳವಣಿಗೆಯನ್ನು ಕುರಿತು ಕಲಾವಿದೆ ಚರಿತಾ ಮೈಸೂರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.Last Updated 31 ಆಗಸ್ಟ್ 2018, 19:30 IST