‘ನಾನು ಅಪ್ಪಟ ಬೆಂಗಳೂರು ಮನುಷ್ಯ. ಮಣ್ಣಿನ ಮಗ, ಹಳ್ಳಿಯಿಂದ ಬಂದವನು ಎಂದು ಹೇಳಿಕೊಳ್ಳಲು ಅವಕಾಶವೇ ಇಲ್ಲ’ ಎಂದು ಅಲವತ್ತುಕೊಳ್ಳುವಷ್ಟು ಅಪ್ಪಟ ಬೆಂಗಳೂರಿಗರು ಎಸ್.ಸುರೇಶ್ಕುಮಾರ್ (ಜನನ: ನವೆಂಬರ್ 11, 1955). ಚಿಕ್ಕ ವಯಸ್ಸಿನಲ್ಲೇ ಆರ್ಎಸ್ಎಸ್ ಸೇರಿದ ಅವರು, ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. 1983ರಲ್ಲಿ ರಾಮಕೃಷ್ಣ ಹೆಗಡೆ ಅವರ ಜನಪ್ರಿಯತೆಯ ನಡುವೆಯೂ ಬಿಜೆಪಿಯಿಂದ (ಶ್ರೀರಾಂಪುರ ವಾರ್ಡ್) ಪಾಲಿಕೆ ಸದಸ್ಯರಾಗಿ ಆಯ್ಕೆಯಾದರು. 1994, 1999, 2008, 2013ರಲ್ಲಿ ಶಾಸಕರಾಗಿ ಆಯ್ಕೆಯಾದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಕಾನೂನು, ನಗರಾಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.