ಸಾವಿರಾರು ಮನೆಗಳಿಗೆ ವಿದ್ಯುತ್, ನೀರು ಸರಬರಾಜು ಕಡಿತವಾಗಿದೆ. ಹೆದ್ದಾರಿಗಳು ಬಿರುಕು ಬಿಟ್ಟಿವೆ. ಜನಜೀವನ ಅಸ್ತವ್ಯಸ್ತವಾಗಿದೆ. ಕಂಪನದ ತೀವ್ರಕ್ಕೆ ಬುಲೆಟ್ ರೈಲು ತಳಿ ತಪ್ಪಿದೆ. ಸಾವು–ನೋವು ಸಂಭವಿಸಿಲ್ಲ. ಅನಿರ್ದಿಷ್ಟಾವಧಿಗೆ ಬುಲೆಟ್ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಸುರಕ್ಷತೆ ದೃಷ್ಟಿಯಿಂದ ಕೆಲ ಹೆದ್ದಾರಿಗಳನ್ನು ಮುಚ್ಚಲಾಗಿದೆ.