<p><strong>ಶಿಕ್ಷಣ ಮಾಧ್ಯಮ ಬದಲಾವಣೆಗೆ ಕಾಲ ನಿಗದಿ: ರಾವ್ ನಕಾರ</strong></p>.<p><strong>ನವದೆಹಲಿ, ಮೇ 13–</strong> ‘ಪಠ್ಯ ಪುಸ್ತಕಗಳ ಸಿದ್ಧತೆ ಸಾಕಷ್ಟು ನಡೆದಿದೆಯೆಂದು ನನಗೆ ತೃಪ್ತಿಯಾಗುವವರೆಗೆ’ ಇಂಗ್ಲಿಷ್ನಿಂದ ಪ್ರಾದೇಶಿಕ ಭಾಷೆಗೆ ಶಿಕ್ಷಣ ಮಾಧ್ಯಮವನ್ನು ಬದಲಾಯಿಸಲು ತಾವು ಕಾಲ ನಿಗದಿ ಮಾಡುವುದಿಲ್ಲವೆಂದು ಶಿಕ್ಷಣ ಸಚಿವ ಶ್ರೀ ವಿ.ಕೆ.ಆರ್.ವಿ. ರಾವ್ ಅವರು ಇಂದು ಲೋಕಸಭೆಗೆ ತಿಳಿಸಿದರು.</p>.<p>ಕಾಲ ನಿಗದಿ ಮಾಡುವಂತೆ ಕೇಳಿ ಶ್ರೀ ಮಧುಲಿಮೆಯ ಮತ್ತಿತರ ಕೆಲವರು ಒಂದು ಗಂಟೆ ಚರ್ಚೆ ಎತ್ತಿದ್ದರು.</p>.<p>ಡಾ. ರಾವ್ ಅವರು, ಸರಕಾರವು ಶಿಕ್ಷಣ ಮಾಧ್ಯಮದ ಬದಲಾವಣೆಗೆ ಬಯಸಿದರೂ ‘ವಿದ್ಯಾರ್ಥಿಯ ಜ್ಞಾನ ಮತ್ತು ಶಿಕ್ಷಣದ ಮಟ್ಟ ನರಳುವಂತಹ ರೀತಿಯಲ್ಲಿ ನಾವು ಅದನ್ನು ಬದಲಾಯಿಸಬಾರದು’ ಎಂದರು.</p>.<p>ಪ್ರಾದೇಶಿಕ ಭಾಷೆಗಳಲ್ಲಿ ಪಠ್ಯ ಪುಸ್ತಕಗಳನ್ನು ತಯಾರಿಸಲು ಸರಕಾರ ‘ನಿರ್ದಿಷ್ಟ’ ಹೆಜ್ಜೆ ತೆಗೆದುಕೊಳ್ಳುತ್ತಿರುವುದಾಗಿ ಸಚಿವರು ಭರವಸೆ ಕೊಟ್ಟರು.</p>.<p><strong>ರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್ ಹೆಸರು ಸೂಚಿಸದಿದ್ದರೆ ಗಿರಿ ರಾಜೀನಾಮೆ?</strong></p>.<p><strong>ನವದೆಹಲಿ, ಮೇ 13–</strong> ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಪ್ರಧಾನಿ ಇಂದಿರಾ ಗಾಂಧಿಯವರೊಡನೆ ಅರ್ಧ ಗಂಟೆ ಮಾತುಕತೆ ನಡೆಸಿದರು.</p>.<p>ಮುಂದಿನ ರಾಷ್ಟ್ರಪತಿ ಯಾರೆಂಬ ಬಗೆಗೆ ಅವರು ಚರ್ಚಿಸಿದರೆಂದು ಹೇಳಲಾಗಿದೆ. ಅಭ್ಯರ್ಥಿ ಬಗೆಗೆ ಒಟ್ಟು ಅಭಿಪ್ರಾಯ ಮೂಡದಿದ್ದರೆ ಪಕ್ಷದ ಪ್ರಬಲ ವ್ಯಕ್ತಿಯನ್ನು ನಿಲ್ಲಿಸಬೇಕೆಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರೆಂದು ಸುದ್ದಿ.</p>.<p>ಹಂಗಾಮಿ ರಾಷ್ಟ್ರಪತಿ ವಿ.ವಿ. ಗಿರಿಯವರನ್ನೂ ಕಾಂಗ್ರೆಸ್ ಅಧ್ಯಕ್ಷರು ಭೇಟಿ ಮಾಡಿದ್ದರು. ರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷವು ತಮ್ಮ ಹೆಸರನ್ನು ಸೂಚಿಸದಿದ್ದರೆ ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡದೆ ಬೇರಾವ ಮಾರ್ಗವೂ ತಮಗಿಲ್ಲವೆಂದು ಗಿರಿ ಸ್ಪಷ್ಟಪಡಿಸಿದರೆಂದು ಹೇಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಕ್ಷಣ ಮಾಧ್ಯಮ ಬದಲಾವಣೆಗೆ ಕಾಲ ನಿಗದಿ: ರಾವ್ ನಕಾರ</strong></p>.<p><strong>ನವದೆಹಲಿ, ಮೇ 13–</strong> ‘ಪಠ್ಯ ಪುಸ್ತಕಗಳ ಸಿದ್ಧತೆ ಸಾಕಷ್ಟು ನಡೆದಿದೆಯೆಂದು ನನಗೆ ತೃಪ್ತಿಯಾಗುವವರೆಗೆ’ ಇಂಗ್ಲಿಷ್ನಿಂದ ಪ್ರಾದೇಶಿಕ ಭಾಷೆಗೆ ಶಿಕ್ಷಣ ಮಾಧ್ಯಮವನ್ನು ಬದಲಾಯಿಸಲು ತಾವು ಕಾಲ ನಿಗದಿ ಮಾಡುವುದಿಲ್ಲವೆಂದು ಶಿಕ್ಷಣ ಸಚಿವ ಶ್ರೀ ವಿ.ಕೆ.ಆರ್.ವಿ. ರಾವ್ ಅವರು ಇಂದು ಲೋಕಸಭೆಗೆ ತಿಳಿಸಿದರು.</p>.<p>ಕಾಲ ನಿಗದಿ ಮಾಡುವಂತೆ ಕೇಳಿ ಶ್ರೀ ಮಧುಲಿಮೆಯ ಮತ್ತಿತರ ಕೆಲವರು ಒಂದು ಗಂಟೆ ಚರ್ಚೆ ಎತ್ತಿದ್ದರು.</p>.<p>ಡಾ. ರಾವ್ ಅವರು, ಸರಕಾರವು ಶಿಕ್ಷಣ ಮಾಧ್ಯಮದ ಬದಲಾವಣೆಗೆ ಬಯಸಿದರೂ ‘ವಿದ್ಯಾರ್ಥಿಯ ಜ್ಞಾನ ಮತ್ತು ಶಿಕ್ಷಣದ ಮಟ್ಟ ನರಳುವಂತಹ ರೀತಿಯಲ್ಲಿ ನಾವು ಅದನ್ನು ಬದಲಾಯಿಸಬಾರದು’ ಎಂದರು.</p>.<p>ಪ್ರಾದೇಶಿಕ ಭಾಷೆಗಳಲ್ಲಿ ಪಠ್ಯ ಪುಸ್ತಕಗಳನ್ನು ತಯಾರಿಸಲು ಸರಕಾರ ‘ನಿರ್ದಿಷ್ಟ’ ಹೆಜ್ಜೆ ತೆಗೆದುಕೊಳ್ಳುತ್ತಿರುವುದಾಗಿ ಸಚಿವರು ಭರವಸೆ ಕೊಟ್ಟರು.</p>.<p><strong>ರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್ ಹೆಸರು ಸೂಚಿಸದಿದ್ದರೆ ಗಿರಿ ರಾಜೀನಾಮೆ?</strong></p>.<p><strong>ನವದೆಹಲಿ, ಮೇ 13–</strong> ಕಾಂಗ್ರೆಸ್ ಅಧ್ಯಕ್ಷ ಶ್ರೀ ಎಸ್. ನಿಜಲಿಂಗಪ್ಪನವರು ಇಂದು ಪ್ರಧಾನಿ ಇಂದಿರಾ ಗಾಂಧಿಯವರೊಡನೆ ಅರ್ಧ ಗಂಟೆ ಮಾತುಕತೆ ನಡೆಸಿದರು.</p>.<p>ಮುಂದಿನ ರಾಷ್ಟ್ರಪತಿ ಯಾರೆಂಬ ಬಗೆಗೆ ಅವರು ಚರ್ಚಿಸಿದರೆಂದು ಹೇಳಲಾಗಿದೆ. ಅಭ್ಯರ್ಥಿ ಬಗೆಗೆ ಒಟ್ಟು ಅಭಿಪ್ರಾಯ ಮೂಡದಿದ್ದರೆ ಪಕ್ಷದ ಪ್ರಬಲ ವ್ಯಕ್ತಿಯನ್ನು ನಿಲ್ಲಿಸಬೇಕೆಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರೆಂದು ಸುದ್ದಿ.</p>.<p>ಹಂಗಾಮಿ ರಾಷ್ಟ್ರಪತಿ ವಿ.ವಿ. ಗಿರಿಯವರನ್ನೂ ಕಾಂಗ್ರೆಸ್ ಅಧ್ಯಕ್ಷರು ಭೇಟಿ ಮಾಡಿದ್ದರು. ರಾಷ್ಟ್ರಪತಿ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷವು ತಮ್ಮ ಹೆಸರನ್ನು ಸೂಚಿಸದಿದ್ದರೆ ಉಪ ರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡದೆ ಬೇರಾವ ಮಾರ್ಗವೂ ತಮಗಿಲ್ಲವೆಂದು ಗಿರಿ ಸ್ಪಷ್ಟಪಡಿಸಿದರೆಂದು ಹೇಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>