ಗುರುವಾರ ಊರಿನಿಂದ ನಗರಕ್ಕೆ ಬಂದಿದ್ದ ಅಂಜನಾ, ಶುಕ್ರವಾರ ಬೆಳಿಗ್ಗೆ ಸಂದೀಪ್ನ ಕೊಠಡಿಗೆ ಬಂದಿದ್ದಳು. ಅಲ್ಲಿ ಇಬ್ಬರ ನಡುವೆ ಜಗಳವಾಗಿದೆ. ಆಗ ಮಲಗುವ ಮಂಚದ ಮೇಲೆ ವಯರ್ನಿಂದ ಉಸಿರುಗಟ್ಟಿಸಿ ಆಕೆಯನ್ನು ಕೊಲೆ ಮಾಡಿದ ಆತ, ಬಳಿಕ ಸ್ಥಳದಿಂದ ಪರಾರಿಯಾಗಿದ್ದ. ಕೊಠಡಿಯಲ್ಲಿ ಆತನ ಗುರುತಿನ ಚೀಟಿ ಸೇರಿದಂತೆ ಯಾವುದೇ ಮಾಹಿತಿಯೂ ಇರಲಿಲ್ಲ. ತಕ್ಷಣವೇ ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.