<p><strong>ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮಳೆ ಅನಾಹುತ: 3 ಸಾವು</strong></p>.<p><strong>ಮಂಗಳೂರು, ಜುಲೈ 12– </strong>ಸೋಮವಾರ ಬೆಳಿಗ್ಗೆಯಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆ ಹಾಗೂ ಗಾಳಿಗೆ ಇಬ್ಬರು ಬಲಿಯಾಗಿದ್ದು, ಲಕ್ಷಾಂತರ ರೂಪಾಯಿಗಳ ಆಸ್ತಿ–ಪಾಸ್ತಿ ನಷ್ಟವಾಗಿದೆ.</p>.<p>ಕುಂದಾಪುರ ಸಮೀಪದ ಹಟ್ಟಿಕುದುರಿಯಿಂದ ಹಟ್ಟಿಯಂಗಡಿಗೆ ದೋಣಿ ಮೂಲಕ ನದಿ ದಾಟುತ್ತಿದ್ದ ಮೂವರು ಭಾರೀ ಗಾಳಿ<br />ಮಳೆಗೆ ಸಿಲುಕಿ ನೀರಿನಲ್ಲಿ ಕೊಚ್ಚಿ ಹೋದರು. ಈ ಮೂವರ ಪೈಕಿ ಒಬ್ಬ ಈಜಿ ದಡ ಸೇರಿದ್ದು ಇನ್ನಿಬ್ಬರು ದೋಣಿ ಸಹಿತ ನೀರುಪಾಲಾದರು. ಇವರ ಮೃತ ದೇಹ ಇದುವರೆಗೆ ದೊರೆತಿಲ್ಲ. ಶೋಧನಾ ಕಾರ್ಯ ಮುಂದುವರೆದಿದೆ. ಪುತ್ತೂರಿನಲ್ಲಿ ವೃದ್ಧೆಯೊಬ್ಬಳು ಸತ್ತಿದ್ದು, ತಣ್ಣೀರುಬಾವಿ ಕಡಲು ತೀರದಲ್ಲಿ ಮೀನುಗಾರನೊಬ್ಬ ಕಾಣೆಯಾಗಿದ್ದಾನೆ ಎಂದು ವರದಿಗಳು ತಿಳಿಸಿವೆ.</p>.<p><strong>ಬೇಹುಗಾರಿಕೆ: ಇಬ್ಬರು ಪಾಕ್ ಅಧಿಕಾರಿಗಳ ಉಚ್ಚಾಟನೆ</strong></p>.<p><strong>ನವದೆಹಲಿ, ಜುಲೈ 12 (ಯುಎನ್ಐ)–</strong> ಭಾರತದಲ್ಲಿ ಗೂಢಚರ್ಯೆ ಚಟುವಟಿಕೆ ನಡೆಸುತ್ತಿದ್ದ ಪಾಕಿಸ್ತಾನದ ಒಬ್ಬ ಹಿರಿಯ ರಾಜತಾಂತ್ರಿಕ ಸೇರಿದಂತೆ ಇಬ್ಬರು ಅಧಿಕಾರಿಗಳನ್ನು ಭಾರತ ಇಂದು ಉಚ್ಚಾಟಿಸಿತು. ಇದಕ್ಕೆ ಪ್ರತೀಕಾರ ಎಂಬಂತೆ, ಭಾರತದ ರಾಜತಾಂತ್ರಿಕ ವಿ.ಎಸ್. ಚವಾಣ್ ಅವರು 7 ದಿನಗಳ ಒಳಗೆ ಇಸ್ಲಾಮಾಬಾದ್ ಬಿಟ್ಟು ತೊಲಗುವಂತೆ ಪಾಕಿಸ್ತಾನ ಇಂದು ಆದೇಶಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಮಳೆ ಅನಾಹುತ: 3 ಸಾವು</strong></p>.<p><strong>ಮಂಗಳೂರು, ಜುಲೈ 12– </strong>ಸೋಮವಾರ ಬೆಳಿಗ್ಗೆಯಿಂದ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆ ಹಾಗೂ ಗಾಳಿಗೆ ಇಬ್ಬರು ಬಲಿಯಾಗಿದ್ದು, ಲಕ್ಷಾಂತರ ರೂಪಾಯಿಗಳ ಆಸ್ತಿ–ಪಾಸ್ತಿ ನಷ್ಟವಾಗಿದೆ.</p>.<p>ಕುಂದಾಪುರ ಸಮೀಪದ ಹಟ್ಟಿಕುದುರಿಯಿಂದ ಹಟ್ಟಿಯಂಗಡಿಗೆ ದೋಣಿ ಮೂಲಕ ನದಿ ದಾಟುತ್ತಿದ್ದ ಮೂವರು ಭಾರೀ ಗಾಳಿ<br />ಮಳೆಗೆ ಸಿಲುಕಿ ನೀರಿನಲ್ಲಿ ಕೊಚ್ಚಿ ಹೋದರು. ಈ ಮೂವರ ಪೈಕಿ ಒಬ್ಬ ಈಜಿ ದಡ ಸೇರಿದ್ದು ಇನ್ನಿಬ್ಬರು ದೋಣಿ ಸಹಿತ ನೀರುಪಾಲಾದರು. ಇವರ ಮೃತ ದೇಹ ಇದುವರೆಗೆ ದೊರೆತಿಲ್ಲ. ಶೋಧನಾ ಕಾರ್ಯ ಮುಂದುವರೆದಿದೆ. ಪುತ್ತೂರಿನಲ್ಲಿ ವೃದ್ಧೆಯೊಬ್ಬಳು ಸತ್ತಿದ್ದು, ತಣ್ಣೀರುಬಾವಿ ಕಡಲು ತೀರದಲ್ಲಿ ಮೀನುಗಾರನೊಬ್ಬ ಕಾಣೆಯಾಗಿದ್ದಾನೆ ಎಂದು ವರದಿಗಳು ತಿಳಿಸಿವೆ.</p>.<p><strong>ಬೇಹುಗಾರಿಕೆ: ಇಬ್ಬರು ಪಾಕ್ ಅಧಿಕಾರಿಗಳ ಉಚ್ಚಾಟನೆ</strong></p>.<p><strong>ನವದೆಹಲಿ, ಜುಲೈ 12 (ಯುಎನ್ಐ)–</strong> ಭಾರತದಲ್ಲಿ ಗೂಢಚರ್ಯೆ ಚಟುವಟಿಕೆ ನಡೆಸುತ್ತಿದ್ದ ಪಾಕಿಸ್ತಾನದ ಒಬ್ಬ ಹಿರಿಯ ರಾಜತಾಂತ್ರಿಕ ಸೇರಿದಂತೆ ಇಬ್ಬರು ಅಧಿಕಾರಿಗಳನ್ನು ಭಾರತ ಇಂದು ಉಚ್ಚಾಟಿಸಿತು. ಇದಕ್ಕೆ ಪ್ರತೀಕಾರ ಎಂಬಂತೆ, ಭಾರತದ ರಾಜತಾಂತ್ರಿಕ ವಿ.ಎಸ್. ಚವಾಣ್ ಅವರು 7 ದಿನಗಳ ಒಳಗೆ ಇಸ್ಲಾಮಾಬಾದ್ ಬಿಟ್ಟು ತೊಲಗುವಂತೆ ಪಾಕಿಸ್ತಾನ ಇಂದು ಆದೇಶಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>