<p><strong>ಸಿಂದಗಿ (ವಿಜಯಪುರ):</strong>ತಾಲ್ಲೂಕಿನ ಮೋರಟಗಿ ಬೈಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಶುಕ್ರವಾರ ನಡೆದ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಲಾರಿ ನಡುವಿನ ಅಪಘಾತದಲ್ಲಿ ಬಾಲಕನೊಬ್ಬ ಮೃತಪಟ್ಟು, ಐವರು ಗಾಯಗೊಂಡಿದ್ದಾರೆ.</p>.<p>ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಹುಣಶ್ಯಾಳ ಗ್ರಾಮದ ಮಂಜುನಾಥ ರುದ್ರಪ್ಪ ಹಿಪ್ಪರಗಿ (16) ಮೃತ ಬಾಲಕ.</p>.<p>ಜೇರಟಗಿಯ -ಯಮನೂರಿ ರಾಜಣ್ಣ ಇಂಗಳೆ, ಸಿದ್ದಪ್ಪ ವಸ್ತಾರಿ, ಗಬಸಾವಳಗಿಯ ಚಂದ್ರಶೇಖರ ಹಡಪದ, ಬಸ್ನ ನಿರ್ವಾಹಕ ಅರ್ಜುನ ನಾಯ್ಕ್, ಕಲಬುರ್ಗಿಯ ಶಬ್ಬೀರ ಪಟೇಲ ಗಾಯಗೊಂಡಿದ್ದು, ಈ ಎಲ್ಲರೂ ಅಪಘಾತಕ್ಕೀಡಾದ ಬಸ್ನಲ್ಲಿ ಪಯಣಿಸುತ್ತಿದ್ದರು.</p>.<p>ಗಾಯಾಳುಗಳಿಗೆ ಸಿಂದಗಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎನ್ನಲಾಗಿದೆ.</p>.<p>ಕಲಬುರ್ಗಿಯಿಂದ ವಿಜಯಪುರಕ್ಕೆ ಬರುತ್ತಿದ್ದ ಬಸ್ಗೆ, ಸಿಂದಗಿಯಿಂದ ಕಲಬುರ್ಗಿಯತ್ತ ತೆರಳುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ನಡೆದಿದೆ ಎಂದು ಸಿಂದಗಿ ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂದಗಿ (ವಿಜಯಪುರ):</strong>ತಾಲ್ಲೂಕಿನ ಮೋರಟಗಿ ಬೈಪಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಶುಕ್ರವಾರ ನಡೆದ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಲಾರಿ ನಡುವಿನ ಅಪಘಾತದಲ್ಲಿ ಬಾಲಕನೊಬ್ಬ ಮೃತಪಟ್ಟು, ಐವರು ಗಾಯಗೊಂಡಿದ್ದಾರೆ.</p>.<p>ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಹುಣಶ್ಯಾಳ ಗ್ರಾಮದ ಮಂಜುನಾಥ ರುದ್ರಪ್ಪ ಹಿಪ್ಪರಗಿ (16) ಮೃತ ಬಾಲಕ.</p>.<p>ಜೇರಟಗಿಯ -ಯಮನೂರಿ ರಾಜಣ್ಣ ಇಂಗಳೆ, ಸಿದ್ದಪ್ಪ ವಸ್ತಾರಿ, ಗಬಸಾವಳಗಿಯ ಚಂದ್ರಶೇಖರ ಹಡಪದ, ಬಸ್ನ ನಿರ್ವಾಹಕ ಅರ್ಜುನ ನಾಯ್ಕ್, ಕಲಬುರ್ಗಿಯ ಶಬ್ಬೀರ ಪಟೇಲ ಗಾಯಗೊಂಡಿದ್ದು, ಈ ಎಲ್ಲರೂ ಅಪಘಾತಕ್ಕೀಡಾದ ಬಸ್ನಲ್ಲಿ ಪಯಣಿಸುತ್ತಿದ್ದರು.</p>.<p>ಗಾಯಾಳುಗಳಿಗೆ ಸಿಂದಗಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎನ್ನಲಾಗಿದೆ.</p>.<p>ಕಲಬುರ್ಗಿಯಿಂದ ವಿಜಯಪುರಕ್ಕೆ ಬರುತ್ತಿದ್ದ ಬಸ್ಗೆ, ಸಿಂದಗಿಯಿಂದ ಕಲಬುರ್ಗಿಯತ್ತ ತೆರಳುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ನಡೆದಿದೆ ಎಂದು ಸಿಂದಗಿ ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>