ಯುವಕವಿ ಕುವೆಂಪು ಅವರಿಗೆ ತಮ್ಮ ರಚನೆ ಟಾಗೂರರ ಗೀತೆಯಂತೆ ‘ರಾಷ್ಟ್ರಗೀತೆ’ ಆಗಬೇಕೆಂಬ ಮಹತ್ವಾಕಾಂಕ್ಷೆಯಿತ್ತು. ‘ಜನಗಣಮನ’ವನ್ನು ರಾಷ್ಟ್ರೀಯ ಚಳವಳಿಯ ಗೀತೆಯನ್ನಾಗಿ ಅಂಗೀಕರಿಸಿದ್ದು ನದರಿನಲ್ಲಿತ್ತು. ಟಾಗೂರರ ‘ಜನಗಣಮನ’ವನ್ನು 50ನೇ ವಯಸ್ಸಿನಲ್ಲಿ ರಚಿಸಿದರು. ಕುವೆಂಪು ಅವರಿಗೆ ನಾಡಗೀತೆಯ ಕರಡು ರಚಿಸುವಾಗ 20; ಅಂತಿಮಗೊಳಿಸುವಾಗ 24 ವರ್ಷ!