ರಾಚಪ್ಪಾಜಿ ನೀಲಗಾರರ ನೆಚ್ಚಿನ ಗುರು. ಮಂಟೇಸ್ವಾಮಿ ಬೋಪ್ಪಣಪುರದ ಪಾತಾಳಲೋಕದಲ್ಲಿ ಪವಡಿಸಿದ ನಂತರ ಅವರ ಸೂಚನೆ ಮೇರೆಗೆ ರಾಜಾಪ್ಪಜಿ, ದೊಡಮ್ಮತಾಯಿ ಹಾಗೂ ತಂಗಿ ಚನ್ನಾಜಮ್ಮ ಅವರು ಆಗಿನ ಎಡತೊರೆಯ ಕಾವೇರೀತೀರದ ಕಡೆಗೆ ಪ್ರಯಾಣ ಬೆಳೆಸುತ್ತಾರೆ. ಆದರೆ, ಪತಿಯ ಜೊತೆ ನಿಲ್ಲಲ್ಲು ಒಪ್ಪದ ದೊಡಮ್ಮತಾಯಿ ತನ್ನ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಳ್ಳಲು ಮುತ್ತನಹಳ್ಳಿಯಲ್ಲಿ ನೆಲೆ ನಿಲ್ಲುತ್ತಾರೆ. ದೊಡ್ಡಮ್ಮತಾಯಿ ಅವರ ಬಯಕೆಯಂತೆ ಅವರನ್ನು ಅಲ್ಲಿಯೇ ಬಿಟ್ಟು ರಾಜಾಪ್ಪಜಿ ಹಾಗೂ ಚೆನ್ನಾಜಮ್ಮ ಕಪ್ಪಡಿಯಲ್ಲಿ ನೆಲೆ ನಿಂತು ಐಕ್ಯರಾಗುತ್ತಾರೆ.