<div> ಎಚ್ಚರಗೊಳ್ಳುವುದೀ ಜನ ಒಂದು ದಿನ<div> ಹತ್ತಿರದಲ್ಲಿದೆ ಆ ದಿನ ಘೋಷಣೆ ಮೊಳಗುವ ಮಹಾದಿನ</div><div> ಕೈಗಳ ಬೇಡಿಕಳಚುವುದು ದಾಸ್ಯದ ಹೊರೆಯು ಇಳಿಯುವುದು</div><div> ಶೋಷಿತ ಜನತೆಯ ಕೇರಿಗಳಲ್ಲಿ ನಾಗರುಗಳು ಹೆಡೆಎತ್ತುವವು</div><div> ನಾಗಜನಾಂಗವು ಬುಸುಗುಡುತ ಊರಿನ ದಿಕ್ಕಿಗೆ ನುಗ್ಗುವುದು</div><div> ಶತಶತಮಾನದ ಕತ್ತಲೆ ಕಳೆದು ಜೋಪಡಿ–ಗುಡಿಸಲ ಮೂಲೆಗಳಲ್ಲಿ</div><div> ಅರಿವಿನ ಹಣತೆ ಬೆಳಗುವುದು.</div><div> </div><div> ಪೀಡಿತ ಜನಗಳ ಹಾಡಿಗಳಲ್ಲಿ ಕಾಡುಗಳಲ್ಲಿ ನಾಡುಗಳಲ್ಲಿ</div><div> ಎಚ್ಚತ್ತವರ ಹಾಡುಗಳು ಮರಗಿಡದಲ್ಲಿ ಮಾರ್ದನಿಸಿ</div><div> ಕುರಿಗಳ ಹಿಂಡಾಗಿದ್ದವರು ಸಿಂಹದ ಗರ್ಜನೆ ಮಾಡುವರು</div><div> ತಪ್ಪನು ಮಾಡದ ಮುಗ್ಧರ ಮನೆಗೆ ಬೆಂಕಿಯ ಹಚ್ಚಿದ ಖೂಳರಿಗೆ</div><div> ಸಾವಿನ ಗುಂಡಿಯ ತೋಡುವರು.</div><div> ಮನೆಮನೆಯಲ್ಲಿ ಮನಮನದಲ್ಲಿ ಗುಡುಗು ಸಿಡಿಲಿನ ಸದ್ದಾಗಿ</div><div> ಕ್ರಾಂತಿಯ ಗಾಳಿ ಬೀಸುವುದು</div><div> </div><div> ಗೋಳಿನ ಕಡಲಿನ ಆಳದಿ ಉರಿಯುವ ಜ್ವಾಲೆಯು ಮುಗಿಲಿಗೆ ಅಪ್ಪಳಿಸಿ</div><div> ಬೆಂಕಿಯ ಮಳೆಯು ಸುರಿಯುವುದು.</div><div> ಮಸಣದ ಗೋರಿಯ ಒಳಗಿಂದ ಸೆಣಸುತ ಏಳುವ ಪೂರ್ವಿಕರು</div><div> ಸಮಸಮಾಜವು ಬರಲೆಂದು ಹೋರಾಟವನು ಮಾಡುವರು</div><div> ಊರುಕೇರಿಗಳೊಂದಾಗಿ ಪ್ರೀತಿಯ ಹೂವು ಅರಳುವವು</div><div> </div><div> ಕೈ ಕೈ ಜೋಡಿಸಿ ಜನಸಮುದಾಯ ಸಮತೆಯ ಬೀಡಿಗೆ ಸಾಗುವುದು.</div><div> ಪುರಾಣ ಕಥೆಗಳ ನೀರಿನ ಗುಳ್ಳೆ ದೊಪ್ಪನೆ ಒಡೆದು ಲಯವಾಗಿ</div><div> ಕೊರಳನು ಹಿಸಕುವ ಕರಾಳ ಕೈಗಳು ಸಮರದಿ ಸೋತು ತುಂಡಾಗಿ</div><div> ಸಮತೆಯ ಸೂರ್ಯ ಮೂಡುವನು ಗೋಳಿನ ಬೆಟ್ಟ ಕರಗುವುದು</div><div> ವನದಲಿ ಬೆದರಿದ ಜಿಂಕೆಗಳು ಛಂಗನೆ ನೆಗೆಯುತ ಓಡುವವು.</div><div> ಪಂಜರದಲ್ಲಿಯ ಹಕ್ಕಿಗಳು ಗಕ್ಕನೆ ಹರುಷದಿ ಹಾರುವವು</div><div> ಎಚ್ಚರಗೊಳ್ಳುವುದೀ ಜನ ಒಂದುದಿನ ಒಂದುದಿನ</div><div> ಹತ್ತಿರದಲ್ಲಿದೆ ಆ ದಿನ ಘೋಷಣೆ ಮೊಳಗುವ ಮಹಾದಿನ</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<div> ಎಚ್ಚರಗೊಳ್ಳುವುದೀ ಜನ ಒಂದು ದಿನ<div> ಹತ್ತಿರದಲ್ಲಿದೆ ಆ ದಿನ ಘೋಷಣೆ ಮೊಳಗುವ ಮಹಾದಿನ</div><div> ಕೈಗಳ ಬೇಡಿಕಳಚುವುದು ದಾಸ್ಯದ ಹೊರೆಯು ಇಳಿಯುವುದು</div><div> ಶೋಷಿತ ಜನತೆಯ ಕೇರಿಗಳಲ್ಲಿ ನಾಗರುಗಳು ಹೆಡೆಎತ್ತುವವು</div><div> ನಾಗಜನಾಂಗವು ಬುಸುಗುಡುತ ಊರಿನ ದಿಕ್ಕಿಗೆ ನುಗ್ಗುವುದು</div><div> ಶತಶತಮಾನದ ಕತ್ತಲೆ ಕಳೆದು ಜೋಪಡಿ–ಗುಡಿಸಲ ಮೂಲೆಗಳಲ್ಲಿ</div><div> ಅರಿವಿನ ಹಣತೆ ಬೆಳಗುವುದು.</div><div> </div><div> ಪೀಡಿತ ಜನಗಳ ಹಾಡಿಗಳಲ್ಲಿ ಕಾಡುಗಳಲ್ಲಿ ನಾಡುಗಳಲ್ಲಿ</div><div> ಎಚ್ಚತ್ತವರ ಹಾಡುಗಳು ಮರಗಿಡದಲ್ಲಿ ಮಾರ್ದನಿಸಿ</div><div> ಕುರಿಗಳ ಹಿಂಡಾಗಿದ್ದವರು ಸಿಂಹದ ಗರ್ಜನೆ ಮಾಡುವರು</div><div> ತಪ್ಪನು ಮಾಡದ ಮುಗ್ಧರ ಮನೆಗೆ ಬೆಂಕಿಯ ಹಚ್ಚಿದ ಖೂಳರಿಗೆ</div><div> ಸಾವಿನ ಗುಂಡಿಯ ತೋಡುವರು.</div><div> ಮನೆಮನೆಯಲ್ಲಿ ಮನಮನದಲ್ಲಿ ಗುಡುಗು ಸಿಡಿಲಿನ ಸದ್ದಾಗಿ</div><div> ಕ್ರಾಂತಿಯ ಗಾಳಿ ಬೀಸುವುದು</div><div> </div><div> ಗೋಳಿನ ಕಡಲಿನ ಆಳದಿ ಉರಿಯುವ ಜ್ವಾಲೆಯು ಮುಗಿಲಿಗೆ ಅಪ್ಪಳಿಸಿ</div><div> ಬೆಂಕಿಯ ಮಳೆಯು ಸುರಿಯುವುದು.</div><div> ಮಸಣದ ಗೋರಿಯ ಒಳಗಿಂದ ಸೆಣಸುತ ಏಳುವ ಪೂರ್ವಿಕರು</div><div> ಸಮಸಮಾಜವು ಬರಲೆಂದು ಹೋರಾಟವನು ಮಾಡುವರು</div><div> ಊರುಕೇರಿಗಳೊಂದಾಗಿ ಪ್ರೀತಿಯ ಹೂವು ಅರಳುವವು</div><div> </div><div> ಕೈ ಕೈ ಜೋಡಿಸಿ ಜನಸಮುದಾಯ ಸಮತೆಯ ಬೀಡಿಗೆ ಸಾಗುವುದು.</div><div> ಪುರಾಣ ಕಥೆಗಳ ನೀರಿನ ಗುಳ್ಳೆ ದೊಪ್ಪನೆ ಒಡೆದು ಲಯವಾಗಿ</div><div> ಕೊರಳನು ಹಿಸಕುವ ಕರಾಳ ಕೈಗಳು ಸಮರದಿ ಸೋತು ತುಂಡಾಗಿ</div><div> ಸಮತೆಯ ಸೂರ್ಯ ಮೂಡುವನು ಗೋಳಿನ ಬೆಟ್ಟ ಕರಗುವುದು</div><div> ವನದಲಿ ಬೆದರಿದ ಜಿಂಕೆಗಳು ಛಂಗನೆ ನೆಗೆಯುತ ಓಡುವವು.</div><div> ಪಂಜರದಲ್ಲಿಯ ಹಕ್ಕಿಗಳು ಗಕ್ಕನೆ ಹರುಷದಿ ಹಾರುವವು</div><div> ಎಚ್ಚರಗೊಳ್ಳುವುದೀ ಜನ ಒಂದುದಿನ ಒಂದುದಿನ</div><div> ಹತ್ತಿರದಲ್ಲಿದೆ ಆ ದಿನ ಘೋಷಣೆ ಮೊಳಗುವ ಮಹಾದಿನ</div></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>