<p>ಹೇಳುವೆ ಕೇಳಿರಿ ಚಿಣ್ಣರೆ ನಿಮಗೆ<br /> ಹಕ್ಕಿಯ ತ್ಯಾಗದ ಕತೆಯೊಂದು<br /> ಆಶ್ರಯ ಕೊಟ್ಟ ಮರಕ್ಕಾಗಿ ತನ್ನ<br /> ಪ್ರಾಣವ ತೆತ್ತ ಪರಿಯನ್ನು</p>.<p>ಅಗ್ನಿ ದೇವಗೆ ಅಜೀರ್ಣವಾಗಿ<br /> ಹೊಟ್ಟೆಯ ನೋವು ಬಂದಿತ್ತು<br /> ಧನ್ವಂತರಿಯೆಂಬ ವೈದ್ಯರನ್ನು<br /> ತಕ್ಷಣ ಕರೆಯಿಸಲಾಗಿತ್ತು</p>.<p>ಅಗ್ನಿದೇವನ ಪರೀಕ್ಷಿಸಿ ವೈದ್ಯರು<br /> ಸಲಹೆಯೊಂದನು ಕೊಟ್ಟರು<br /> ಉದರ ನೋವಿನ ಶಮನಕೆ ಔಷಧಿ<br /> ಸಸ್ಯಗಳೇ ಮದ್ದು ಎಂದರು</p>.<p>ಖಾಂಡವ ವನದಲಿ ಗಿಡಮೂಲಿಕೆಗಳು<br /> ಯಥೇಚ್ಛವಾಗಿ ದೊರೆಯುವವು<br /> ಈಗಲೇ ಹೋಗಿ ವನವನು ಸವಿಯಲು<br /> ನೋವಿಗೆ ಮುಕ್ತಿಯು ಲಭಿಸುವುದು</p>.<p>ವೈದ್ಯರ ಮಾತಿಗೆ ಮನ್ನಣೆ ಕೊಟ್ಟು<br /> ಖಾಂಡವ ವನವನು ಧಹಿಸಲು<br /> ಶುರುವನು ಹಚ್ಚಿದ ಅಗ್ನಿದೇವನು<br /> ಔಷಧೀ ಸಸ್ಯಗಳೆಲ್ಲವನು</p>.<p>ವನವದು ಹೊತ್ತಿ ಉರಿಯಲು ಇಂದ್ರಗೆ<br /> ಕೋಪವು ನೆತ್ತಿಗೆ ಏರಿತ್ತು<br /> ತಡವನು ಮಾಡದೆ ವನದೊಳು ರಭಸದಿ<br /> ಸುರಿಯಲು ತೊಡಗಿದ ಮಳೆಯನ್ನು</p>.<p>ಅಗ್ನಿದೇವನು ಓಡುತ ಹೋಗಿ<br /> ಕಂಡನು ಕೃಷ್ಣಾರ್ಜುನರನ್ನು<br /> ಖಾಂಡವ ವನವನು ಧಹಿಸಲು ತನಗೆ<br /> ರಕ್ಷಣೆಯನ್ನು ಕೋರಿದನು</p>.<p>ಒಡನೆ ಅರ್ಜುನ ತನ್ನಯ ಬಾಣದಿ<br /> ಗಗನಕೆ ಚಪ್ಪರ ತೊಡಿಸಿದನು<br /> ಕೆಳಗಡೆ ಒಂದ್ಹನಿ ಬೀಳದ ಹಾಗೆ<br /> ತಡೆಯನು ಮಳೆಗೆ ಒಡ್ಡಿದನು</p>.<p>ಇಂದ್ರನ ಸುತನಿಗೆ ಧನ್ಯತೆ ಅರ್ಪಿಸಿ<br /> ನಿರ್ಭಯಗೊಂಡು ಅಗ್ನಿದೇವನು<br /> ಖಾಂಡವ ವನವನು ಸುಟ್ಟು ಹಾಕಲು<br /> ಸಂತಸದಿಂದಲಿ ತೊಡಗಿದನು</p>.<p>ಆ ವನದಲಿ ಇರುವಾ ಮರದಲಿ ಒಂದು<br /> ಹಕ್ಕಿಯು ಆಶ್ರಯ ಪಡೆದಿತ್ತು<br /> ಅಗ್ನಿದೇವನ ಉದರಕೆ ಆ ಮರ<br /> ಆಹುತಿಯಾಗಲು ತೊಡಗಿತ್ತು</p>.<p>ಗಾಬರಿಗೊಂಡಾ ಹಕ್ಕಿಯು ಮರವನು<br /> ಉಳಿಸಲು ಉಪಾಯ ಹೂಡಿತ್ತು<br /> ಹತ್ತಿರ ಹರಿಯುವ ತೊರೆಯಲಿ ಮುಳುಗಿ<br /> ರೆಕ್ಕೆಯ ನೆನೆಸಿ ತಂದಿತ್ತು</p>.<p>ನೆನೆದಾ ದೇಹದ ರೆಕ್ಕೆಗಳಿಂದಲಿ<br /> ಮರಕೆ ನೀರನು ಸಿಡಿಸಿತ್ತು<br /> ಹೊತ್ತಿದ ಅಗ್ನಿಗೆ ಹಕ್ಕಿಯ ಅಲ್ಪ<br /> ನೀರದು ನಿಲುಕದೆ ಹೋಗಿತ್ತು</p>.<p>ಎಷ್ಟೋ ಹೊತ್ತು ಹಕ್ಕಿಯು ಹೀಗೆ<br /> ಪ್ರಯಾಸವನ್ನು ಪಟ್ಟಿತ್ತು<br /> ತನ್ನಯ ಪ್ರಾಣವು ಮರದಾ ಜೊತೆಗೆ<br /> ದಹಿಸುವವರೆಗೂ ಶ್ರಮಿಸಿತ್ತು</p>.<p>ಹಕ್ಕಿಯ ಕಾಳಜಿ ಕಣ್ಣಾರೆ ಕಂಡ<br /> ಇಂದ್ರನ ಮನವು ಕಲುಕಿತ್ತು<br /> ಖಾಂಡವ ದಹನದ ಜೊತೆಯಲಿ ಹಕ್ಕಿಯ<br /> ತ್ಯಾಗದ ಕತೆಯೂ ಬೆರೆತ್ತಿತ್ತು.</p>.<p>ಚಿತ್ರಗಳು; ಮದನ್ ಸಿ.ಪಿ.<br /> .......<br /> <strong>ಸೋಮಲಿಂಗ ಬೇಡರ ಆಳೂರ</strong><br /> </p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಹೇಳುವೆ ಕೇಳಿರಿ ಚಿಣ್ಣರೆ ನಿಮಗೆ<br /> ಹಕ್ಕಿಯ ತ್ಯಾಗದ ಕತೆಯೊಂದು<br /> ಆಶ್ರಯ ಕೊಟ್ಟ ಮರಕ್ಕಾಗಿ ತನ್ನ<br /> ಪ್ರಾಣವ ತೆತ್ತ ಪರಿಯನ್ನು</p>.<p>ಅಗ್ನಿ ದೇವಗೆ ಅಜೀರ್ಣವಾಗಿ<br /> ಹೊಟ್ಟೆಯ ನೋವು ಬಂದಿತ್ತು<br /> ಧನ್ವಂತರಿಯೆಂಬ ವೈದ್ಯರನ್ನು<br /> ತಕ್ಷಣ ಕರೆಯಿಸಲಾಗಿತ್ತು</p>.<p>ಅಗ್ನಿದೇವನ ಪರೀಕ್ಷಿಸಿ ವೈದ್ಯರು<br /> ಸಲಹೆಯೊಂದನು ಕೊಟ್ಟರು<br /> ಉದರ ನೋವಿನ ಶಮನಕೆ ಔಷಧಿ<br /> ಸಸ್ಯಗಳೇ ಮದ್ದು ಎಂದರು</p>.<p>ಖಾಂಡವ ವನದಲಿ ಗಿಡಮೂಲಿಕೆಗಳು<br /> ಯಥೇಚ್ಛವಾಗಿ ದೊರೆಯುವವು<br /> ಈಗಲೇ ಹೋಗಿ ವನವನು ಸವಿಯಲು<br /> ನೋವಿಗೆ ಮುಕ್ತಿಯು ಲಭಿಸುವುದು</p>.<p>ವೈದ್ಯರ ಮಾತಿಗೆ ಮನ್ನಣೆ ಕೊಟ್ಟು<br /> ಖಾಂಡವ ವನವನು ಧಹಿಸಲು<br /> ಶುರುವನು ಹಚ್ಚಿದ ಅಗ್ನಿದೇವನು<br /> ಔಷಧೀ ಸಸ್ಯಗಳೆಲ್ಲವನು</p>.<p>ವನವದು ಹೊತ್ತಿ ಉರಿಯಲು ಇಂದ್ರಗೆ<br /> ಕೋಪವು ನೆತ್ತಿಗೆ ಏರಿತ್ತು<br /> ತಡವನು ಮಾಡದೆ ವನದೊಳು ರಭಸದಿ<br /> ಸುರಿಯಲು ತೊಡಗಿದ ಮಳೆಯನ್ನು</p>.<p>ಅಗ್ನಿದೇವನು ಓಡುತ ಹೋಗಿ<br /> ಕಂಡನು ಕೃಷ್ಣಾರ್ಜುನರನ್ನು<br /> ಖಾಂಡವ ವನವನು ಧಹಿಸಲು ತನಗೆ<br /> ರಕ್ಷಣೆಯನ್ನು ಕೋರಿದನು</p>.<p>ಒಡನೆ ಅರ್ಜುನ ತನ್ನಯ ಬಾಣದಿ<br /> ಗಗನಕೆ ಚಪ್ಪರ ತೊಡಿಸಿದನು<br /> ಕೆಳಗಡೆ ಒಂದ್ಹನಿ ಬೀಳದ ಹಾಗೆ<br /> ತಡೆಯನು ಮಳೆಗೆ ಒಡ್ಡಿದನು</p>.<p>ಇಂದ್ರನ ಸುತನಿಗೆ ಧನ್ಯತೆ ಅರ್ಪಿಸಿ<br /> ನಿರ್ಭಯಗೊಂಡು ಅಗ್ನಿದೇವನು<br /> ಖಾಂಡವ ವನವನು ಸುಟ್ಟು ಹಾಕಲು<br /> ಸಂತಸದಿಂದಲಿ ತೊಡಗಿದನು</p>.<p>ಆ ವನದಲಿ ಇರುವಾ ಮರದಲಿ ಒಂದು<br /> ಹಕ್ಕಿಯು ಆಶ್ರಯ ಪಡೆದಿತ್ತು<br /> ಅಗ್ನಿದೇವನ ಉದರಕೆ ಆ ಮರ<br /> ಆಹುತಿಯಾಗಲು ತೊಡಗಿತ್ತು</p>.<p>ಗಾಬರಿಗೊಂಡಾ ಹಕ್ಕಿಯು ಮರವನು<br /> ಉಳಿಸಲು ಉಪಾಯ ಹೂಡಿತ್ತು<br /> ಹತ್ತಿರ ಹರಿಯುವ ತೊರೆಯಲಿ ಮುಳುಗಿ<br /> ರೆಕ್ಕೆಯ ನೆನೆಸಿ ತಂದಿತ್ತು</p>.<p>ನೆನೆದಾ ದೇಹದ ರೆಕ್ಕೆಗಳಿಂದಲಿ<br /> ಮರಕೆ ನೀರನು ಸಿಡಿಸಿತ್ತು<br /> ಹೊತ್ತಿದ ಅಗ್ನಿಗೆ ಹಕ್ಕಿಯ ಅಲ್ಪ<br /> ನೀರದು ನಿಲುಕದೆ ಹೋಗಿತ್ತು</p>.<p>ಎಷ್ಟೋ ಹೊತ್ತು ಹಕ್ಕಿಯು ಹೀಗೆ<br /> ಪ್ರಯಾಸವನ್ನು ಪಟ್ಟಿತ್ತು<br /> ತನ್ನಯ ಪ್ರಾಣವು ಮರದಾ ಜೊತೆಗೆ<br /> ದಹಿಸುವವರೆಗೂ ಶ್ರಮಿಸಿತ್ತು</p>.<p>ಹಕ್ಕಿಯ ಕಾಳಜಿ ಕಣ್ಣಾರೆ ಕಂಡ<br /> ಇಂದ್ರನ ಮನವು ಕಲುಕಿತ್ತು<br /> ಖಾಂಡವ ದಹನದ ಜೊತೆಯಲಿ ಹಕ್ಕಿಯ<br /> ತ್ಯಾಗದ ಕತೆಯೂ ಬೆರೆತ್ತಿತ್ತು.</p>.<p>ಚಿತ್ರಗಳು; ಮದನ್ ಸಿ.ಪಿ.<br /> .......<br /> <strong>ಸೋಮಲಿಂಗ ಬೇಡರ ಆಳೂರ</strong><br /> </p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>