<p>ಗಡಿಗಳಿಂದ ಯೋಧರಂತೆ ಗುಡಿಗಳಿಂದ ದೇವರಂತೆ<br /> ಮನೆಗಳಿಂದ ನೆಂಟರಂತೆ ಗುಡಿಸಲಿಂದ ಗೆಳೆಯರಂತೆ<br /> ಊರಿನಿಂದ ಧೀರರಂತೆ ಕಾಡಿನಿಂದ ಹುಲಿಗಳಂತೆ<br /> ಶ್ರವಣಬೆಳಗೊಳಕ್ಕೆ ಬಂದ ಬಳಗ ಯಾವುದು?</p>.<p>ಹೊಲಗಳಿಂದ ಗದ್ದೆಯಿಂದ ತೋಟದಿಂದ ಪೇಟೆಯಿಂದ<br /> ಹಳದಿ ಕೆಂಪು ಧ್ವಜವ ಹಿಡಿದು ಕನ್ನಡಕ್ಕೆ ಮನವ ಮಿಡಿದು<br /> ಮುಗಿಲಿನಿಂದ ನೆಲಕೆ ಇಳಿದ ಸೂರ್ಯ ಚಂದ್ರ ತಾರೆಯಂತೆ<br /> ಬಾಹುಬಲಿಯ ಪದಕೆ ಬಿದ್ದ ಬೆಳಕು ಯಾವುದು?</p>.<p>ಜೈಕಾರದ ಝೇಂಕಾರವು ಹತ್ತು ಲೋಕಗಳಿಗೆ ಹಬ್ಬಿ<br /> ಕನ್ನಡ ಭುವನೇಶ್ವರಿಯನು ಹೊತ್ತು ಮೆರೆಸಿ ಹರುಷಗೊಂಡ<br /> ಕುಣಿದು ಮಣಿದು ದಣಿಯದಂತೆ ಗೆಲುವಿನಿಂದ ತಲೆಯನೆತ್ತಿ<br /> ಮುನ್ನಡೆಯುವ ರಣಧೀರರ ಪಡೆಯು ಯಾವುದು?<br /> ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯು ಹರಸಲೆಂದು<br /> ಪುಂಡಲೀಕ ಹಾಲಂಬಿಯ ನುಡಿಸೇವೆಯ ನೋಡಲೆಂದು<br /> ಬಾಲಕೃಷ್ಣರಭಿಮಾನದ ಕೈಂಕರ್ಯವ ಕಾಣಲೆಂದು<br /> ನದಿಗಳಂತೆ ಹರಿದು ಬಂದ ಜನವು ಯಾವುದು?</p>.<p>ಕನ್ನಡಜನ ಕನ್ನಡಮನ ಕನ್ನಡತನ ಬಂದಿತಣ್ಣ<br /> ಕೀಳರಿಮೆಯ ನೈರಾಶ್ಯದ ಕತ್ತಲನು ಅಳಿಸಿತಣ್ಣ<br /> ಕನ್ನಡಿಗರ ಎದೆಗಳಲ್ಲಿ ಹೋರಾಡುವ ಕಿಚ್ಚು ಹಚ್ಚಿ<br /> ಝಗಮಗಿಸುತ ಜ್ವಲಿಸಲಣ್ಣ ಕನ್ನಡ ಜ್ಯೋತಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗಡಿಗಳಿಂದ ಯೋಧರಂತೆ ಗುಡಿಗಳಿಂದ ದೇವರಂತೆ<br /> ಮನೆಗಳಿಂದ ನೆಂಟರಂತೆ ಗುಡಿಸಲಿಂದ ಗೆಳೆಯರಂತೆ<br /> ಊರಿನಿಂದ ಧೀರರಂತೆ ಕಾಡಿನಿಂದ ಹುಲಿಗಳಂತೆ<br /> ಶ್ರವಣಬೆಳಗೊಳಕ್ಕೆ ಬಂದ ಬಳಗ ಯಾವುದು?</p>.<p>ಹೊಲಗಳಿಂದ ಗದ್ದೆಯಿಂದ ತೋಟದಿಂದ ಪೇಟೆಯಿಂದ<br /> ಹಳದಿ ಕೆಂಪು ಧ್ವಜವ ಹಿಡಿದು ಕನ್ನಡಕ್ಕೆ ಮನವ ಮಿಡಿದು<br /> ಮುಗಿಲಿನಿಂದ ನೆಲಕೆ ಇಳಿದ ಸೂರ್ಯ ಚಂದ್ರ ತಾರೆಯಂತೆ<br /> ಬಾಹುಬಲಿಯ ಪದಕೆ ಬಿದ್ದ ಬೆಳಕು ಯಾವುದು?</p>.<p>ಜೈಕಾರದ ಝೇಂಕಾರವು ಹತ್ತು ಲೋಕಗಳಿಗೆ ಹಬ್ಬಿ<br /> ಕನ್ನಡ ಭುವನೇಶ್ವರಿಯನು ಹೊತ್ತು ಮೆರೆಸಿ ಹರುಷಗೊಂಡ<br /> ಕುಣಿದು ಮಣಿದು ದಣಿಯದಂತೆ ಗೆಲುವಿನಿಂದ ತಲೆಯನೆತ್ತಿ<br /> ಮುನ್ನಡೆಯುವ ರಣಧೀರರ ಪಡೆಯು ಯಾವುದು?<br /> ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯು ಹರಸಲೆಂದು<br /> ಪುಂಡಲೀಕ ಹಾಲಂಬಿಯ ನುಡಿಸೇವೆಯ ನೋಡಲೆಂದು<br /> ಬಾಲಕೃಷ್ಣರಭಿಮಾನದ ಕೈಂಕರ್ಯವ ಕಾಣಲೆಂದು<br /> ನದಿಗಳಂತೆ ಹರಿದು ಬಂದ ಜನವು ಯಾವುದು?</p>.<p>ಕನ್ನಡಜನ ಕನ್ನಡಮನ ಕನ್ನಡತನ ಬಂದಿತಣ್ಣ<br /> ಕೀಳರಿಮೆಯ ನೈರಾಶ್ಯದ ಕತ್ತಲನು ಅಳಿಸಿತಣ್ಣ<br /> ಕನ್ನಡಿಗರ ಎದೆಗಳಲ್ಲಿ ಹೋರಾಡುವ ಕಿಚ್ಚು ಹಚ್ಚಿ<br /> ಝಗಮಗಿಸುತ ಜ್ವಲಿಸಲಣ್ಣ ಕನ್ನಡ ಜ್ಯೋತಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>