ಪ್ರಖ್ಯಾತ ಸಿತಾರ್ ವಾದಕ, ಬಹುವಾದ್ಯ ಪಾರಂಗತ, ಸಂಗೀತ ಸಂಶೋಧಕ ಪಂಡಿತ್ ಅರಣ್ಯ ಕುಮಾರ್ ಅವರ ಹಿತಾನುಭವವಿದು. ಅರಣ್ಯ ಕುಮಾರ್ ಆಧ್ಯಾತ್ಮ, ಆದರ್ಶ ದಂಪತಿಯಾದ ಮಡ್ಡೆಪ್ಪ– ಸರಸ್ವತಿ ಅವರ ಪುತ್ರ. ಇಟಲಿಯಲ್ಲಿ ಹುಟ್ಟಿ, ಭಾರತೀಯ ಸಂಸ್ಕೃತಿಯನ್ನು ಒಪ್ಪಿ, ಅಪ್ಪಿ ಬಂದ ಸರಸ್ವತಿ ( ಮೂಲ ಹೆಸರು ಅಫೀಲಿಯಾ), ಸಾಧು– ಸಂತರ ಸೇವೆಯಲ್ಲೇ ತೃಪ್ತಿ ಕಂಡಿದ್ದ ಮಡ್ಡೆಪ್ಪ ಲೌಕಿಕ ಜೀವನಕ್ಕಿಂತ ಆಧ್ಯತ್ಮಿಕ ಜೀವನಕ್ಕೆ ಹೆಚ್ಚು ಆದ್ಯತೆ ಕೊಟ್ಟವರು. ಅವರಿಗೆ ಮೂರು ಮಕ್ಕಳು. ಮಗ ಅರಣ್ಯ ಕುಮಾರ್ ಈಶ ಸೇವೆಯಲ್ಲಿ ಸಾಧಕ. ಇನ್ನೊಬ್ಬ ಪುತ್ರ ಶ್ರವಣಕುಮಾರ್ ಭಾರತೀಯ ಸೇನೆಯಲ್ಲಿ ಯೋಧನಾಗಿ ಕರ್ತವ್ಯ ನಿರ್ವಹಿಸಿದ ದೇಶ ಸೇವಕ. ಕಿರಿಯ ಪುತ್ರಿ ದ್ರೌಪತಿ ಶಿಕ್ಷಕಿ.