<p class="rtecenter"><em><strong>ದಿವಂಗತ ಎನ್.ಶ್ರೀನಿವಾಸ ಉಡುಪ ಅವರ ಇನ್ನೂ ಅಚ್ಚಿನಲ್ಲಿರುವ ಕಾವ್ಯ ಸಂಕಲನ 'ಪಾಪಚ್ಚಿ ಪದ್ಯಗಳು' ಕೃತಿಯಿಂದ ಆಯ್ದ ಶಿಶುಪದ್ಯಗಳು.</strong></em></p>.<p class="rtecenter"><em><strong>**</strong></em></p>.<p><strong>ಮೂವರು ಮುದುಕರು</strong><br />ಹಳ್ಳದಾಚೆ ಕೊಳ್ಳದಲ್ಲಿ ಮೂರು ಮುದುಕರಿದ್ದರು<br />ಬೆಳ್ಳನೆ ಬೆಳುದಿಂಗಳಲ್ಲಿ ಅವರು ಯಾಕೊ ಎದ್ದರು.</p>.<p>ಮೊದಲ ಮುದುಕ ‘ಚಳಿ’ ಎನ್ನುತ ಮುಗಿಲನೆಳೆದು ಹೊದ್ದನು!<br />‘ಹಸಿವು, ಹಸಿವು’ ಎನ್ನುತೊಬ್ಬ ಇಡೀ ಬೆಟ್ಟ ಮೆದ್ದನು!</p>.<p>ಮೂರನೇ ಮುದುಕ ಎದ್ದು ‘ನೀರು ಬೇಕು’ ಎಂದನು<br />ಬೊಗಸೆಯಲ್ಲಿ ಮೊಗೆದು ಮೊಗೆದು, ಇಡೀ ಹಳ್ಳ ಕುಡಿದನು!</p>.<p>ಬೆಳಗಾಯಿತು; ಸೂರ್ಯ ಬಂದ: ಆಕಾಶವ ಹುಡುಕಿದ<br />‘ಅಯ್ಯೋ, ಆಗಸವೆ ಇಲ್ಲ! ಮೂಡಲೆಲ್ಲಿ?’– ಮಿಡುಕಿದ!</p>.<p>ಹಣ್ಣ ಅರಸಿ ತಿನ್ನಲೆಂದು ಹಕ್ಕಿ ಹಾರಿ ಬಂದವು<br />‘ಬೆಟ್ಟವಿಲ್ಲ, ಮರಗಳಿಲ್ಲ, ಹೊಟ್ಟೆಗೇನು?’– ನೊಂದವು</p>.<p>ಆನೆ, ಸಿಂಹ, ಹುಲಿ, ಜಿಂಕೆ ನೀರು ಕುಡಿಯಬಂದವು<br />‘ಹಳ್ಳದಲ್ಲಿ ನೀರೆ ಇಲ್ಲ, ಏನು ಗತಿ!’ ಎಂದವು.</p>.<p>ಮೂರು ಮುದುಕರಿದನು ಕಂಡು ತುಂಬ ನೊಂದುಕೊಂಡರು<br />ತಾವು ಮಾಡಿದಂಥ ತಪ್ಪು ಎಂಥದೆಂದು ಕಂಡರು.</p>.<p>ಮೊದಲ ಮುದುಕ ಮೈಯ ಒದರಿ ಆಕಾಶವ ಎಸೆದನು<br />ಎರಡನೆಯವ ಬೆಟ್ಟವನ್ನು ಹೊಟ್ಟೆಯಿಂದ ಹಿಸಿದನು</p>.<p>ಮೂರನೇ ಮುದುಕ ಕುಡಿದ ನೀರೆಲ್ಲವ ಉಗುಳಿದ<br />ತಾ ಮಾಡಿದ ತಪ್ಪಿಗಾಗಿ ಬಹಳ ಬಹಳ ಮರುಗಿದ!</p>.<p>ಬಿಸಿಲು ಕೊಟ್ಟ ಸೂರ್ಯ; ಗಾಳಿ ಹಿತವಾಗಿ ಬೀಸಿತು!<br />ಹೂವರಳಿತು; ಹಕ್ಕಿ ಹಾಡಿ ಮೃಗಸಂಕುಲ ತಣಿಯಿತು!</p>.<p class="rtecenter">***</p>.<p><strong>ಚೆಂಡಿನ ಅಳಲು</strong><br />ಯಾಕಪ್ಪಾ ನಂಗಿಂಥಾ ಶಿಕ್ಷೆ ಕೊಟ್ಟೆ ಭಗವಂತಾ?<br />ಮೂರು ಹೊತ್ತೂ ಒದೆತಾ ಹೊಡೆತಾ ತಿಂತಾ ಇರು ಅಂತಾ!</p>.<p>ಫುಸ್ಫುಸ್ ಎಂದು ಗಾಳಿ ತುಂಬಿಸಿ ‘ಫುಟ್ಬಾಲ್’ ಅಂತಾರೆ<br />ಎರ್ರಾಬಿರ್ರಿ ಒದೆದೂ ಒದೆದೂ ಜೀವಾನೆ ತಿಂತಾರೆ!</p>.<p>ಸುಸ್ತಾಗಿ ನಾ ಮೂಲೆ ಸೇರಿದರೆ ‘ಗೋಲ್, ಗೋಲ್’ ಅಂತಾರೆ<br />ಮತ್ತಲ್ಲಿಂದ ಹೊರಕ್ಕೆ ಎಳೆದು ಗೋಳು ಹೊಯ್ತಾರೆ!</p>.<p>‘ಕ್ರಿಕೆಟ್’ ಅಂತ ಬ್ಯಾಟಲಿ ನಂಗೆ ಫಟಾರ್ ಬಡೀತಾರೆ<br />ನೋವು ತಾಳದೆ ದೂರ ಓಡಿದರೆ, ಸಿಳ್ಳೆ ಹೊಡೀತಾರೆ!</p>.<p>ನೆಟ್ಟನು ಕಟ್ಟಿ ಆ ಕಡೆ ಈ ಕಡೆ ತಳ್ಳಿ ಕುಣೀತಾರೆ<br />ನೆಲದಲ್ಲಿರಿಸಿ ‘ಹಾಕೀ!’ ಎಂದು ದೊಣ್ಣೇಲಿ ಬಡಿತಾರೆ!</p>.<p>ಇಷ್ಟೊಂದ್ ಶಿಕ್ಷೆ ನಂಗೊಬ್ಬನಿಗೇ ಯಾಕೋ ಗೊತ್ತಿಲ್ಲ!<br />ದೊಡ್ದಾಗಿದ್ರೂ ಚಿಕ್ದಾಗಿದ್ರೂ ನೋವು ತಪ್ಪೋಲ್ಲ!</p>.<p>ಯಾರಿಗೂ ಬೇಡ ಇಂಥಾ ಗೋಳು, ಅಯ್ಯೋ ಭಗವಂತಾ!<br />ಯಾರು ಹೊಗಳಿದರೋ ನಿನ್ನನು ಭಾಳ ‘ಕರುಣಾಕರ’ ಅಂತಾ?!</p>.<p class="rtecenter">***</p>.<p><strong>ಕಪ್ಪೆಯ ಬಯಕೆ</strong><br />ಊರಿನ ಆಚೆ ಇದೆಯಲ್ಲಪ್ಪ ದೊಡ್ಡ ಸಂತೆ ಮಾಳ - ಅಲ್ಲಿ<br />ಪೀರ ಗಫೂರ ಹೊಡೆಯುತ್ತಿದ್ದ ಕುದುರೇಗೆ ಲಾಳ.</p>.<p>ಠಣ್ ಠಣ್ ಠಪ್ ಠಪ್ ಎನ್ನುತ್ತಿತ್ತು ಸುತ್ತಿಗೇ ಹೊಡೆತ – ಜೊತೆಗೇ<br />ಹ್ಞೇ ಹ್ಞೇ ಅಂತಾ ಕೇಳುತ್ತಿತ್ತು ಕುದುರೇ ಕೆನೆತ.</p>.<p>ಧಪ್ ಧಪ್ ಎಂದು ಕುಪ್ಪಳಿಸುತ್ತಾ ಬಂತು ಒಂದು ಕಪ್ಪೆ - ಹಾಗೇ<br />ಏನಿದು ನಡೆದಿದೆ ಎನ್ನುತ ನೋಡಿತು ಮುಚ್ಚದೆಯೇ ರೆಪ್ಪೆ.</p>.<p>ಕಪ್ಪೆ ಕೇಳಿತು ಹೆದರೀ ಹೆದರೀ ಮಲಗಿದ ಕುದುರೇನ: ‘ಅಯ್ಯೋ<br />ನೋವಾಗಲ್ಲವೇ ಈ ಹೊಡೆತಕ್ಕೆ ಕೊಂಚವೂ, ಯಜಮಾನ?’</p>.<p>‘ಲಾಳ ಹೊಡೆದರೆ ಕಾಲು ಜಾರದು, ಗೊತ್ತಾ ನನರಾಜಾ? ನೀನೂ<br />ಹೊಡೆಸಿಕೊಂಡರೆ ಗೊತ್ತಾಗುತ್ತೆ ನಿನಗೂ ಅದರ ಮಜಾ!’</p>.<p>ಪೀರ ಗಫೂರನ ಕೇಳಕೊಂಡಿತು ಕಪ್ಪೆ ಅಂಗಲಾಚಿ: ‘ಅಯ್ಯಾ,<br />ನನ್ನ ಕಾಲಿಗೂ ಹೊಡೆಯೋ ಲಾಳ’ ಎಂದು ಕಾಲು ಚಾಚಿ.</p>.<p>ಗಫೂರ ಗದರಿದ: ‘ತೊಲಗಿಲ್ಲಿಂದ: ನಿನಗೇತಕೆ ಲಾಳ? ಅಲ್ಲದೆ<br />ಸುತ್ತಿಗೆ ಏಟಿಗೆ ಸತ್ತೇ ಹೋಗುವಿ, ಗೊತ್ತೇ ಮುಟ್ಠಾಳ!’</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="rtecenter"><em><strong>ದಿವಂಗತ ಎನ್.ಶ್ರೀನಿವಾಸ ಉಡುಪ ಅವರ ಇನ್ನೂ ಅಚ್ಚಿನಲ್ಲಿರುವ ಕಾವ್ಯ ಸಂಕಲನ 'ಪಾಪಚ್ಚಿ ಪದ್ಯಗಳು' ಕೃತಿಯಿಂದ ಆಯ್ದ ಶಿಶುಪದ್ಯಗಳು.</strong></em></p>.<p class="rtecenter"><em><strong>**</strong></em></p>.<p><strong>ಮೂವರು ಮುದುಕರು</strong><br />ಹಳ್ಳದಾಚೆ ಕೊಳ್ಳದಲ್ಲಿ ಮೂರು ಮುದುಕರಿದ್ದರು<br />ಬೆಳ್ಳನೆ ಬೆಳುದಿಂಗಳಲ್ಲಿ ಅವರು ಯಾಕೊ ಎದ್ದರು.</p>.<p>ಮೊದಲ ಮುದುಕ ‘ಚಳಿ’ ಎನ್ನುತ ಮುಗಿಲನೆಳೆದು ಹೊದ್ದನು!<br />‘ಹಸಿವು, ಹಸಿವು’ ಎನ್ನುತೊಬ್ಬ ಇಡೀ ಬೆಟ್ಟ ಮೆದ್ದನು!</p>.<p>ಮೂರನೇ ಮುದುಕ ಎದ್ದು ‘ನೀರು ಬೇಕು’ ಎಂದನು<br />ಬೊಗಸೆಯಲ್ಲಿ ಮೊಗೆದು ಮೊಗೆದು, ಇಡೀ ಹಳ್ಳ ಕುಡಿದನು!</p>.<p>ಬೆಳಗಾಯಿತು; ಸೂರ್ಯ ಬಂದ: ಆಕಾಶವ ಹುಡುಕಿದ<br />‘ಅಯ್ಯೋ, ಆಗಸವೆ ಇಲ್ಲ! ಮೂಡಲೆಲ್ಲಿ?’– ಮಿಡುಕಿದ!</p>.<p>ಹಣ್ಣ ಅರಸಿ ತಿನ್ನಲೆಂದು ಹಕ್ಕಿ ಹಾರಿ ಬಂದವು<br />‘ಬೆಟ್ಟವಿಲ್ಲ, ಮರಗಳಿಲ್ಲ, ಹೊಟ್ಟೆಗೇನು?’– ನೊಂದವು</p>.<p>ಆನೆ, ಸಿಂಹ, ಹುಲಿ, ಜಿಂಕೆ ನೀರು ಕುಡಿಯಬಂದವು<br />‘ಹಳ್ಳದಲ್ಲಿ ನೀರೆ ಇಲ್ಲ, ಏನು ಗತಿ!’ ಎಂದವು.</p>.<p>ಮೂರು ಮುದುಕರಿದನು ಕಂಡು ತುಂಬ ನೊಂದುಕೊಂಡರು<br />ತಾವು ಮಾಡಿದಂಥ ತಪ್ಪು ಎಂಥದೆಂದು ಕಂಡರು.</p>.<p>ಮೊದಲ ಮುದುಕ ಮೈಯ ಒದರಿ ಆಕಾಶವ ಎಸೆದನು<br />ಎರಡನೆಯವ ಬೆಟ್ಟವನ್ನು ಹೊಟ್ಟೆಯಿಂದ ಹಿಸಿದನು</p>.<p>ಮೂರನೇ ಮುದುಕ ಕುಡಿದ ನೀರೆಲ್ಲವ ಉಗುಳಿದ<br />ತಾ ಮಾಡಿದ ತಪ್ಪಿಗಾಗಿ ಬಹಳ ಬಹಳ ಮರುಗಿದ!</p>.<p>ಬಿಸಿಲು ಕೊಟ್ಟ ಸೂರ್ಯ; ಗಾಳಿ ಹಿತವಾಗಿ ಬೀಸಿತು!<br />ಹೂವರಳಿತು; ಹಕ್ಕಿ ಹಾಡಿ ಮೃಗಸಂಕುಲ ತಣಿಯಿತು!</p>.<p class="rtecenter">***</p>.<p><strong>ಚೆಂಡಿನ ಅಳಲು</strong><br />ಯಾಕಪ್ಪಾ ನಂಗಿಂಥಾ ಶಿಕ್ಷೆ ಕೊಟ್ಟೆ ಭಗವಂತಾ?<br />ಮೂರು ಹೊತ್ತೂ ಒದೆತಾ ಹೊಡೆತಾ ತಿಂತಾ ಇರು ಅಂತಾ!</p>.<p>ಫುಸ್ಫುಸ್ ಎಂದು ಗಾಳಿ ತುಂಬಿಸಿ ‘ಫುಟ್ಬಾಲ್’ ಅಂತಾರೆ<br />ಎರ್ರಾಬಿರ್ರಿ ಒದೆದೂ ಒದೆದೂ ಜೀವಾನೆ ತಿಂತಾರೆ!</p>.<p>ಸುಸ್ತಾಗಿ ನಾ ಮೂಲೆ ಸೇರಿದರೆ ‘ಗೋಲ್, ಗೋಲ್’ ಅಂತಾರೆ<br />ಮತ್ತಲ್ಲಿಂದ ಹೊರಕ್ಕೆ ಎಳೆದು ಗೋಳು ಹೊಯ್ತಾರೆ!</p>.<p>‘ಕ್ರಿಕೆಟ್’ ಅಂತ ಬ್ಯಾಟಲಿ ನಂಗೆ ಫಟಾರ್ ಬಡೀತಾರೆ<br />ನೋವು ತಾಳದೆ ದೂರ ಓಡಿದರೆ, ಸಿಳ್ಳೆ ಹೊಡೀತಾರೆ!</p>.<p>ನೆಟ್ಟನು ಕಟ್ಟಿ ಆ ಕಡೆ ಈ ಕಡೆ ತಳ್ಳಿ ಕುಣೀತಾರೆ<br />ನೆಲದಲ್ಲಿರಿಸಿ ‘ಹಾಕೀ!’ ಎಂದು ದೊಣ್ಣೇಲಿ ಬಡಿತಾರೆ!</p>.<p>ಇಷ್ಟೊಂದ್ ಶಿಕ್ಷೆ ನಂಗೊಬ್ಬನಿಗೇ ಯಾಕೋ ಗೊತ್ತಿಲ್ಲ!<br />ದೊಡ್ದಾಗಿದ್ರೂ ಚಿಕ್ದಾಗಿದ್ರೂ ನೋವು ತಪ್ಪೋಲ್ಲ!</p>.<p>ಯಾರಿಗೂ ಬೇಡ ಇಂಥಾ ಗೋಳು, ಅಯ್ಯೋ ಭಗವಂತಾ!<br />ಯಾರು ಹೊಗಳಿದರೋ ನಿನ್ನನು ಭಾಳ ‘ಕರುಣಾಕರ’ ಅಂತಾ?!</p>.<p class="rtecenter">***</p>.<p><strong>ಕಪ್ಪೆಯ ಬಯಕೆ</strong><br />ಊರಿನ ಆಚೆ ಇದೆಯಲ್ಲಪ್ಪ ದೊಡ್ಡ ಸಂತೆ ಮಾಳ - ಅಲ್ಲಿ<br />ಪೀರ ಗಫೂರ ಹೊಡೆಯುತ್ತಿದ್ದ ಕುದುರೇಗೆ ಲಾಳ.</p>.<p>ಠಣ್ ಠಣ್ ಠಪ್ ಠಪ್ ಎನ್ನುತ್ತಿತ್ತು ಸುತ್ತಿಗೇ ಹೊಡೆತ – ಜೊತೆಗೇ<br />ಹ್ಞೇ ಹ್ಞೇ ಅಂತಾ ಕೇಳುತ್ತಿತ್ತು ಕುದುರೇ ಕೆನೆತ.</p>.<p>ಧಪ್ ಧಪ್ ಎಂದು ಕುಪ್ಪಳಿಸುತ್ತಾ ಬಂತು ಒಂದು ಕಪ್ಪೆ - ಹಾಗೇ<br />ಏನಿದು ನಡೆದಿದೆ ಎನ್ನುತ ನೋಡಿತು ಮುಚ್ಚದೆಯೇ ರೆಪ್ಪೆ.</p>.<p>ಕಪ್ಪೆ ಕೇಳಿತು ಹೆದರೀ ಹೆದರೀ ಮಲಗಿದ ಕುದುರೇನ: ‘ಅಯ್ಯೋ<br />ನೋವಾಗಲ್ಲವೇ ಈ ಹೊಡೆತಕ್ಕೆ ಕೊಂಚವೂ, ಯಜಮಾನ?’</p>.<p>‘ಲಾಳ ಹೊಡೆದರೆ ಕಾಲು ಜಾರದು, ಗೊತ್ತಾ ನನರಾಜಾ? ನೀನೂ<br />ಹೊಡೆಸಿಕೊಂಡರೆ ಗೊತ್ತಾಗುತ್ತೆ ನಿನಗೂ ಅದರ ಮಜಾ!’</p>.<p>ಪೀರ ಗಫೂರನ ಕೇಳಕೊಂಡಿತು ಕಪ್ಪೆ ಅಂಗಲಾಚಿ: ‘ಅಯ್ಯಾ,<br />ನನ್ನ ಕಾಲಿಗೂ ಹೊಡೆಯೋ ಲಾಳ’ ಎಂದು ಕಾಲು ಚಾಚಿ.</p>.<p>ಗಫೂರ ಗದರಿದ: ‘ತೊಲಗಿಲ್ಲಿಂದ: ನಿನಗೇತಕೆ ಲಾಳ? ಅಲ್ಲದೆ<br />ಸುತ್ತಿಗೆ ಏಟಿಗೆ ಸತ್ತೇ ಹೋಗುವಿ, ಗೊತ್ತೇ ಮುಟ್ಠಾಳ!’</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>