ರಾಯಚೂರಿನ ಅಸ್ಕಿಹಾಳದವರು. ಓದಿದ್ದು ಪತ್ರಿಕೋದ್ಯಮ. ದೆಹಲಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕ. ಎಳೆಯ ಪಾಪದ ಹೆಸರು ನಿಮ್ಮಿಚ್ಛೆಯಂತೆ ಇಟ್ಟುಕೊಳ್ಳಿ(೨೦೧೦),ಜುಲುಮೆ(೨೦೧೪) (ಕವಿತೆ). ಕರ್ನಾಟಕ ಸಂಘ ಶಿವಮೊಗ್ಗದ ಡಾ.ಜಿ.ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ(೨೦೧೦), ಡಾ.ಪು.ತಿ.ನ. ಕಾವ್ಯ ನಾಟಕ ಪುರಸ್ಕಾರ (೨೦೧೪), ಮತ್ತು ಬಿಡಿಗವಿತೆಗಳಿಗೆ ಸಂಚಯ, ಸಂಕ್ರಮಣ, ಪ್ರಜಾವಾಣಿಕಾವ್ಯ ಸ್ಪರ್ಧೆಯಲ್ಲಿ ಬಹುಮಾನ ಲಭಿಸಿವೆ. ಲಯಗಾರಿಕೆಯಿಂದ ಕೂಡಿದ ಇವರ ಕವಿತೆ, ಕಾವ್ಯಾಸಕ್ತರ ಗಮನ ಸೆಳೆದಿವೆ. ಇದಿಮಾಯಿ ಸಂಕಲನ, ಮತ್ತು ರಾಯಚೂರಿನ ದಲಿತ- ಬಂಡಾಯ ಚಳವಳಿಯ ದಿ. ಬೋಳಬಂಡೆಪ್ಪನ ಕುರಿತಾದ ಬದುಕು- ಬರಹಬಂಡಾಯದ ಬೋಳಬಂಡೆಪ್ಪ ಪ್ರಕಟಣೆಗೆ ಸಿದ್ಧಗೊಂಡಿವೆ.