ಬದಲಾವಣೆ ಬರಲಿ: ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಮಲ್ಲಿಕಾ ಘಂಟಿ ಮಾತನಾಡಿ, ‘ಸಾಹಿತ್ಯ ಸಾಮಾಜಿಕ ಬದಲಾವಣೆಗೂ ಕಾರಣವಾಗಬೇಕು. ಇರುವ ಸಂಪನ್ಮೂಲವನ್ನು ಬಳಸಿಕೊಂಡು ಎಲ್ಲ ಜನರ ಜೀವನವನ್ನು ಸುಧಾರಣೆ ಮಾಡಲು, ಬದಲಾವಣೆ ತರಲು ಕಾರಣವಾಗುವಂತಹ ಜ್ಞಾನವನ್ನು ಪಸರಿಸಲು ಕನ್ನಡ ಸಾಹಿತ್ಯ ಸಶಕ್ತವಾಗಬೇಕು’ ಎಂದರು.