ಚಾಣಕ್ಯರು ಮುಗುಳ್ನಗುತ್ತಾ ಸೈನ್ಯಾಧಿಪತಿಗೆ ಹೇಳಿದರು, ‘ನೋಡಿ, ನೀವು ಬಂದಾಗ ನಾನು ರಾಜ್ಯದ ಕೆಲಸವನ್ನು ಮಾಡುತ್ತಿದ್ದೆ. ಆ ದೀಪದಲ್ಲಿ ರಾಜ್ಯದ ಕೋಷದಿಂದ ಖರೀದಿಸಿದ ಎಣ್ಣೆಯಿತ್ತು. ನಾನುನಿನ್ನೊಂದಿಗೆ ಮಾತನಾಡುವಾಗ, ನನ್ನ ದೀಪವನ್ನು ಹೊತ್ತಿಸಿದೆ. ಯಾಕೆಂದರೆ, ನಿಮ್ಮೊಂದಿಗೆ ನಡೆದ ಮಾತುಕತೆ ವೈಯಕ್ತಿಕವಾಗಿತ್ತು. ರಾಜ್ಯದ ಹಣವನ್ನು ವೈಯಕ್ತಿಕ ಕೆಲಸಗಳಿಗೆ ಉಪಯೋಗಿಸಲು ನನಗೆ ಅಧಿಕಾರವಿಲ್ಲ, ಅದಕ್ಕೇ ಹೀಗೆ ಮಾಡಿದೆ’.