ನಾವೂ ಬದುಕಿ ಇತರರನ್ನು ಬದುಕಲು ಬಿಡಬೇಕು ಎನ್ನುವ ಚಿಂತನೆಯನ್ನು ಅಲ್ಲಲ್ಲಿ ಬಸವಣ್ಣನವರ ವಚನ ಹಾಗೂ ಡಿ.ವಿ. ಗುಂಡಪ್ಪ ಅವರ ಕಗ್ಗಗಳ ಸಹಿತ ಉಲ್ಲೇಖದೊಂದಿಗೆ ಹೇಳಿದ್ದಾರೆ. ಕ್ಷಮೆ, ತಾಳ್ಮೆ, ನಗುವಿನ ಮಹತ್ವ, ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಅದರ ಬಳಕೆಯಲ್ಲಿರಬೇಕಾದ ಎಚ್ಚರಿಕೆ, ಕೆಲಸದಲ್ಲಿನ ಶ್ರದ್ಧೆ ಮತ್ತು ರಾಷ್ಟ್ರಪ್ರೇಮ ಇತ್ಯಾದಿ ವಿಷಯಗಳು ಚರ್ಚೆಯಾಗಿರುವ ಕಾರಣ ಈ ಕೃತಿ ವರ್ತಮಾನದ ಬದುಕಿನ ನಡವಳಿಕೆಗಳಿಗೊಂದು ಕೈಪಿಡಿಯ ಹಾಗೆ ಗೋಚರಿಸುತ್ತದೆ. ವಿದ್ವಾಂಸ
ಜಿ.ಎಸ್.ಭಟ್ ಅವರ ಮುನ್ನುಡಿಯಿದೆ.