ಎರಡನೆಯದು: ನಮ್ಮ ನಿತ್ಯದ ಆಗುಹೋಗುಗಳಲ್ಲಿ ಗೊತ್ತಾದ ಕ್ರಮವೊಂದಿರುತ್ತದೆ. ಅವು ನಮ್ಮ ಯೋಜನೆಯಂತೆಯೋ ಯೋಚನೆ ಯಂತೆಯೋ ಅವು ನಡೆಯವು. ಹೀಗಾಗಿ ಒಂದೊಂದು ಕ್ರಿಯೆಗೂ ಹಿನ್ನೆಲೆಯಲ್ಲಿರುವ ಕಾರಣವನ್ನು ತಿಳಿದು ಅದಕ್ಕೆ ತಕ್ಕಂತೆ ನಮ್ಮ ಯೋಜನೆಯನ್ನು ರೂಪಿಸಿಕೊಂಡರೆ ಮಾತ್ರ ನಮಗೆ ಫಲ ಸಿಗುತ್ತದೆ. ಕಾರ್ಯ–ಕಾರಣ ಸಂಬಂಧವನ್ನು ತಿಳಿದು ಅದರಂತೆ ನಮ್ಮ ಜೀವನವಿಧಾನವನ್ನು ರೂಪಿಸಿಕೊಂಡರೆ ಮಾತ್ರ ನಮಗೆ ಫಲ ಸಿಗುತ್ತದೆ. ನೀರು ಮೇಲಿನಿಂದ ಕೆಳಗೆ ಹರಿಯುತ್ತದೆ; ಆದರೆ ಅದನ್ನು ಮೇಲ್ಮುಖವಾಗಿ ಹರಿಸಬೇಕಾದರೆ ನಾವು ಬೇರೆಯೇ ಕ್ರಮದಲ್ಲಿ ಸಾಧನೆ ಮಾಡಬೇಕಾಗುತ್ತದೆ.